ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ವಿಮಾನಯಾನಕ್ಕೆ ಮರು ಚಾಲನೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೊಂದು ಹೆಜ್ಜೆ ಇಟ್ಟಿರುವುದಾಗಿ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.ಉಭಯ ದೇಶಗಳ ನಡುವೆ ಏರ್ ಬಬಲ್ ಪಾಕ್ಟ್ ನಂತೆ ಈಗಾಗಲೇ ಅಮೇರಿಕಾ-ಬ್ರಿಟನ್-ಫ್ರಾನ್ಸ್-ಜರ್ಮನಿ-ಯುಎಇ ಹಾಗು ಮಾಲ್ಡೀವ್ಸ್ ನಡುವೆ ಷರತ್ತುಬದ್ದ ವಿಮಾನಯಾನ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹದಿಮೂರು ದೇಶಗಳ ವಿಸ್ತರಣೆಗೆ ಮಾತುಕತೆಯಲ್ಲಿ ತೊಡಗಿದೆ.
ಆಸ್ಟ್ರೇಲಿಯಾ-ಜಪಾನ್-ಇಟೆಲಿ-ನ್ಯೂಝಿಲೆಂಡ್-ನೈಜೀರಿಯಾ-ಬಹ್ರೈನ್-ಫಿಲಿಪ್ಫೀನ್ಸ್-ರಷ್ಯಾ-ಸಿಂಗಾಪೂರ್-ದಕ್ಷಿಣ ಕೊರಿಯ-ಇಸ್ರೇಲ್-ಕಿನ್ಯಾ ಹಾಗು ಥಾಯ್ಲೆಂಡ್ ಇದರಲ್ಲಿ ಸೇರಿದೆ.ಅಂತೆಯೇ ನೆರೆಯ ದೇಶಗಳಾದ ನೇಪಾಳ-ಭೂತಾನ್-ಬಾಂಗ್ಲಾದೇಶ-ಅಫ್ಘಾನಿಸ್ತಾನ-ಶ್ರೀಲಂಕಾ ಕ್ಕೂ ವಿಮಾನಯಾನ ಮರು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.ಮಾರ್ಚ್ 23 ರ ಬಳಿಕ ಅಂತರಾಷ್ಟ್ರೀಯ ಉಭಯ ವಿಮಾನಯಾನವನ್ನು ಸರಕಾರ ಸ್ಥಗಿತಗೊಳಿಸಿತ್ತು.ಮೇ 25 ರ ಬಳಿಕ ದೇಶೀಯ ವಿಮಾನಯಾನಕ್ಕೆ ಅನುಮತಿ ನೀಡಲಾಗಿತ್ತು.ಈಗಾಗಲೇ ವಿಮಾನಯಾನ ಉದ್ಯಮ ಕೋವಿಡ್ ನಿಂದಾಗಿ ತೀವ್ರ ನಷ್ಟದಲ್ಲಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.