ಸುಳ್ಯ(ವಿಶ್ವಕನ್ನಡುಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) SSF ಸುಳ್ಯ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್, ಮುತಅಲ್ಲಿಂ ಸಂಗಮ ಆಗಸ್ಟ್ 21ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ದುಆ ನೆರೆವೇರಿಸಿದರು.
SSF ಸುಳ್ಯ ಸೆಕ್ಟರ್ ದಅವಾ ಕನ್ವೀನರ್ ಸಿದ್ದೀಖ್ ಹಿಮಮಿ ಸಖಾಫಿ ಪೈಂಬಚ್ಚಾಲ್ ಅಧ್ಯಕ್ಷತೆಯಲ್ಲಿ SSF ಸುಳ್ಯ ಡಿವಿಷನ್ ಮಾಜಿ ಅಧ್ಯಕ್ಷ ಅಶ್ರಫ್ ಸಖಾಫಿ ಕುಂಭಕ್ಕೋಡು ಉದ್ಘಾಟಿಸಿದರು. SSF ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ ಪ್ರಾಸ್ತಾವಿಕ ಭಾಷಣಗೈದರು. SSF ದ.ಕ ಜಿಲ್ಲಾ ಈಸ್ಟ್ ಝೋನ್ ನಾಯಕರಾದ ಜುನೈದ್ ಸಖಾಫಿ ಜೀರ್ಮುಖಿ ವಿಷಯ ಮಂಡಿಸಿ ಮಾತನಾಡಿದರು.
ಸೆಕ್ಟರ್ ವ್ಯಾಪ್ತಿಯ 10 ಯುನಿಟ್ ಕೇಂದ್ರಗಳ ಮುತಅಲ್ಲಿಂ, ದಅವಾ ವಿದ್ಯಾರ್ಥಿಗಳು ಸಂಗಮದಲ್ಲಿ ಭಾಗವಹಿಸಿದರು. ಎಸ್.ವೈ.ಎಸ್ ಈಸ್ಟ್ ಜಿಲ್ಲಾ ಸದಸ್ಯ ಸಿದ್ದೀಖ್ ಕಟ್ಟೆಕಾರ್, SSF ಸುಳ್ಯ ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಬಿ.ಎ, SSF ಪೈಂಬಚ್ಚಾಲ್ ಶಾಖಾ ಪ್ರ. ಕಾರ್ಯದರ್ಶಿ ಹಸನ್ ಸಅದಿ ಉಪಸ್ಥಿತರಿದ್ದರು. ಸಾಬಿತ್ ಎಲಿಮಲೆ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.