ಕುಂಬ್ರ(ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಕೆಯ್ಯೂರು ಎಂಬಲ್ಲಿ ಸಕ್ರಮವಾಗಿ ಜಾನುವಾರು ಸಾಗಾಟಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬೆಳ್ಳಾರೆಯಿಂದ ಬಂದ ಮತ್ತು ಸ್ಥಳೀಯ ಬಜರಂಗದಳದ ಗೂಂಡಾಗಳು ವಾಹನವನ್ನು ಅಡ್ಡಗಟ್ಟಿ ಹಲ್ಲೆಗೆಯ್ಯಲು ಮುಂದಾದಾಗ ವಾಹನದಲ್ಲಿದ್ದ ಜಾನುವಾರು ಖರೀದಿದಾರರು ಇದು ಅಕ್ರಮ ಸಾಗಾಟ ಅಲ್ಲ ಬದಲಿಗೆ ಸಕ್ರಮ ಸಾಗಾಟ ವೆಂದು ಹೇಳಿದಾಗ ಡ್ಯಾಷ್ ಬೋರ್ಡ್ ನಲ್ಲಿದ್ದ ಅನುಮತಿ ಪತ್ರವನ್ನು ಬಜರಂಗದಳದ ಗೂಂಡಾಗಳು ಬಲವಂತವಾಗಿ ದರೋಡೆ ಮಾಡಿ ಖರೀದಿದಾರರನ್ನು ನಿಂದಿಸಿ ಪರಾರಿಯಾಗಿರುವ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.ಕೆಯ್ಯೂರಿನಲ್ಲಿ ಇತ್ತೀಚಿನಿಂದ ಇದು ಎರಡನೇ ಬಾರಿಯಾಗಿದೆ ಇಂತಹ ಘಟನೆ ಮರುಕಳಿಸಿರುವುದು.
ಜಿಲ್ಲೆಯಲ್ಲಿ ನಿರಂತರವಾಗಿ ಇಂತಹ ಘಟನೆಗಳು ಪುನರಾವರ್ತನೆ ಆಗ್ತಾ ಇದ್ದರು ಪೋಲಿಸ್ ಇಲಾಖೆ ಕೆಲವು ಪ್ರಕರಣಗಳಲ್ಲಿ ಮಾತ್ರ ಕೇಸ್ ದಾಖಲಿಸಿ ಲಘು ಸೆಕ್ಷನ್ ಹಾಕಿ ಜಾಮೀನು ಕೊಡುತ್ತಿರುವುದರಿಂದ ಇವರಿಗೆ ಪೋಲಿಸ್ ಇಲಾಖೆಯ ಪರೋಕ್ಷ ಅನುಮತಿ ಸಿಕ್ಕಿದಂತಾಗಿ ತಮ್ಮ ಮೃಗೀಯ ವರ್ತನೆಯನ್ನು ಮುಂದುವರೆಸುತ್ತಲೇ ಇದ್ದಾರೆ, ಇಂತಹ ಘಟನೆಗಳು ನಡೆದಾಗ ಕೆಲವೊಂದು ಪ್ರಕರಣಗಳಲ್ಲಿ ಜಾನುವಾರು ಸಾಗಾಟಗಾರರು ಆರೋಪಿಗಳಿಂದ ಜೀವಹಾನಿ ಆಗಬಹುದೆಂಬ ಭಯದಿಂದ ಕೇಸ್ ಕೊಡಲು ಹಿಂಜರಿಯುತ್ತಿರುವುದು ಕೂಡ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಲೇ ಇರಲು ಇನ್ನೊಂದು ಕಾರಣ ಕೂಡ ಆಗಿದೆ.
ಹಾಗಾಗಿ ಪೋಲಿಸ್ ಇಲಾಖೆ ಇಂತಹ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಠಿಣ ಸೆಕ್ಷನ್ ಹಾಕಿ ಸಂಘಪರಿವಾರದ ಗೂಂಡಾಗಿರಿಗೆ ಕಡಿವಾಣ ಹಾಕಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತದೆ,ಅದೇ ರೀತಿ ಈ ಪ್ರಕರಣದಲ್ಲಿ ಕೂಡ ಅಕ್ರಮಿಗಳ ವಿರುದ್ಧ ಮೃದು ಧೋರಣೆ ತೋರದೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂದಿಸಬೇಕೆಂದು ಪಕ್ಷದ ಕುಂಬ್ರ ವಲಯಾದ್ಯಕ್ಷ ಶರೀಫ್ ಕಟ್ಟತ್ತಾರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.