ಹಳೆಯಂಗಡಿ (www.vknews.com) : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರದಲ್ಲಿ ಸಾರ್ವಜನಿಕರು ಸುರಿದ ಕಸ,ತ್ಯಾಜ್ಯ ರಾಶಿಗಳು ಕೊಳೆತು ವಾಸನೆ ಬರುತ್ತಿರುವುದರಿಂದ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್, ನ್ಯಾಯವಾದಿ ರಮೇಶ್ ಅಂಚನ್, ಹಿಮಕರ್ ಕದಿಕೆ, ಸತೀಶ್ ಭಟ್ ಕೊಳುವೈಲು ಇವರ ಮಾರ್ಗದರ್ಶನದಲ್ಲಿ ಹಿಂದೂ ಜಾಗರಣ ವೇದಿಕೆ ಇಂದಿರಾನಗರ ಘಟಕ ಇದರ ಸದಸ್ಯರು ಇಂದು ರಸ್ತೆ ಇಕ್ಕೆಲಗಳಲ್ಲಿ ಬೆಳೆದ ಹುಲ್ಲು, ಪೊದೆ ಗಿಡಗಳನ್ನು ಕಡಿದು ಸ್ವಚ್ಛ ಗೊಳಿಸಿದ್ದಲ್ಲದೆ ಇಂದಿರಾನಗರದ ಮಖ್ಯರಸ್ತೆಯಲ್ಲಿ ಸಾರ್ವಜನಿಕರು ಸುರಿದ ಕಸ ತ್ಯಾಜ್ಯಗಳ ರಾಶಿಯನ್ನು ತೆರವುಗೊಳಿಸಿ ಪರಿಸರವನ್ನು ಸಂಪೂರ್ಣ ಸ್ವಚ್ಛ ಪರಿಸರದ ಪರಿವರ್ತನೆಗೆ ಸಾಕ್ಷಿಯಾಾದರು.
ಅಪೇಕ್ಷೆ ಮೇರೆಗೆ ಪಕ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ಯಾಂಟೀನ್ ನಲ್ಲಿ ಅವಳಡಿಸಲಾದ ಸಿಸಿ ಕೆಮರವನ್ನು ಬಳಸಿ, ಕಸ ಸುರಿಯುವ ಜಾಗದಲ್ಲಿ ಮುಂದಕ್ಕೆ ಯಾರೂ ತ್ಯಾಜ್ಯ ಸುರಿಯದಂತೆ ಸಿಸಿ ಕೆಮರ ಇದೆ, ಎಲ್ಲಿಂದೆಲ್ಲಿ ಕಸ,ತ್ಯಾಜ್ಯ ಎಸೆಯುವವರಿಗೆ ಎಚ್ಚರಿಕೆಯ ಬ್ಯಾನರ್ ಹಾಕಲಾಯಿತು.
ಇಂದಿರಾನಗರ ನಗರ ಘಟಕದ ಅಧ್ಯಕ್ಷ ವಿಶ್ವನಾಥ್ ಕೋಟ್ಯಾನ್, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಸದಸ್ಯರುಗಳಾದ ವರುಣ್, ರಾಕೇಶ್, ಸದಾಶಿವ, ಮನೋಜ್ ಕೆಳಸಿಬೊಟ್ಟು, ಅನ್ನಿ ಪೂಜಾರಿ ಮತ್ತಿತರರು ಈ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು.
ಅಲ್ಲದೆ ಉದ್ಯಮಿ ಉದಯ ಹಳೆಯಂಗಡಿ ಇವರು ಜೆಸಿಬಿ ನೀಡಿ ಕಸ ವೀಲೆವಾರಿಯ ಕಾರ್ಯದಲ್ಲಿ ಸಹಕರಿಸಿದರು.
ವರದಿ: ಅದ್ದಿ ಬೊಳ್ಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.