(www.vknews.com) : ಪುತ್ತೂರಿನ ಉಮರಾ ನಾಯಕರಲ್ಲಿ ಪ್ರಮುಖರೂ ಧಾರ್ಮಿಕ ,ಸಾಮಾಜಿಕ,ಸೇವಾಪರ ಸಂಘ ಸಂಸ್ಥೆಗಳಲ್ಲಿ ಸಕ್ರಿಯರೂ ಪ್ರತಿಷ್ಟಿತ ಪುತ್ತೂರು ಸಂಯುಕ್ತ ಜಮಾತ್ ಉಪಾದ್ಯಕ್ಷರೂ ಆಗಿದ್ದ ಬೈತಡ್ಕ ಅಬ್ದುರ್ಹಿಮಾನ್ ಹಾಜಿ ತನ್ನ ಇಹ ಲೋಕದ ಜೀವನಕ್ಕೆ ಪೂರ್ಣ ವಿರಾಮ ಹಾಕಿ ಮರಳಿ ಬಾರಲಾಗದ ಜಗತ್ತಿಗೆ ಪ್ರಯಾಣ ಬೆಳೆಸಿದ್ದಾರೆ.
ಬಹಳ ಮೃದು ಹೃದಯಿಗಳೂ,ಉತ್ತಮ ಕುಟುಂಬಸ್ಥರೂ,ಶ್ರೇಷ್ಟ ವ್ಯಕ್ತಿತ್ವ ಹೊಂದಿದವರೂ,ಎಂತಹ ಜಟಿಲ ಸಮಸ್ಯೆಗಳನ್ನೂ ನಿಭಾಯಿಸುವ ತಾಕತ್ತು ಇದ್ದವರೂ,ಕೊಡುಗೈ ದಾನಿಯೂ,ಉಲಾಮಗಳೊಂದಿಗೆ ಅವಿನಾಭಾವ ಸಂಭಂದ ಇಟ್ಟು ಕೊಂಡವರೂ ಆಗಿದ್ದ ಶ್ರೀಯುತರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುವರೆಂದು ಕನಸು ಮನಸ್ಸಲ್ಲೂ ಊಹಿಸಿರಲಿಲ್ಲ.
ಕಳೆದ ಆಗಸ್ಟ್ 18 ಮಂಗಳವಾರ ಪುತ್ತೂರು ಸಂಯುಕ್ತ ಜಮಾತಿನ ಸಾಮಾನ್ಯ ಸಭೆಯಲ್ಲಿ ಬಹಳ ಲವಲವಿಕೆಯಿಂದಲೇ ಭಾಗವಹಿಸಿದ್ದರು. ಪುತ್ತೂರಿನ ಮುತ್ತು ಬಹಮಾನ್ಯ ಕಮ್ಮಾಡಿ ಇಬ್ರಾಹಿಂ ಹಾಜಿಯವರ ನೆರಳಿನಂತಿದ್ದ ಹಾಜಿಯವರು ಸಂಯುಕ್ತ ಜಮಾತಿನ ಯಾವುದೇ ಮೀಟಿಂಗನ್ನು ಮಿಸ್ ಮಾಡುತ್ತಿರಲಿಲ್ಲ. ಅದೇ ರೀತಿ ಮೊನ್ನೆ ಕೂಡಾ ಬಂದು ನೂತನ ಆಸ್ಪತ್ತೆಯ ಕಟ್ಡಡ ವೀಕ್ಷಿಸಿ ಬಹಳ ಖುಷಿ ಪಟ್ಟಿದ್ದರು.
ಸಮಾಜದ ಎಲ್ಲಾ ರೀತಿಯ ಅಭಿವೃದ್ದಿಗಾಗಿ ತನ್ನ ಹೃದಯ ತುಡಿಯುತ್ತಿದ್ದದ್ದು ಅವರ ಪ್ರತಿಯೊಂದು ಮಾತು ಮತ್ತು ಪ್ರವೃತ್ತಿಯ ಮೂಲಕ ಕಂಡು ಬರುತ್ತಿತ್ತು. ಎಪ್ಪತ್ತರಲ್ಲೂ ಇಪ್ಪತ್ತರ ಆವೇಶ ಪ್ರಕಟಿಸುತ್ತಿದ್ದ ಹಾಜಿಯವರು ಯಾವತ್ತೂ ಶುಭ್ರ ಬಿಳಿಯ ವಸ್ತ್ರಧಾರಿಯಾಗಿ ಕಂಗೊಳಿಸುತ್ತಿದ್ದರು.
ತನ್ನ ಎಲ್ಲಾ ಶಕ್ತಿಯನ್ನು ಸಮಾಜಕ್ಕಾಗಿ ವಿನಿಯೋಗಿಸಿದ ಅಬ್ದುರ್ರಹಿಮಾನ್ ಹಾಜಿಯವರು ದೀರ್ಘ ಕಾಲ ಬೈತಡ್ಕ ಮಸೀದಿಯ ಅದ್ಯಕ್ಷರಾಗಿ ಜಮಾತಿನ ಏಳಿಗೆಗಾಗಿ ಬಹಳಷ್ಟು ಕೊಡುಗೆ ಯನ್ನು ನೀಡಿದ್ದಾರೆ. ಅವರೀಗ ತಾನು ಕೂಡಿಟ್ಟ ಅಪಾರ ಪುಣ್ಯಗಳ ಸಂಗ್ರಹದೊಂದಿಗೆ ಯಾತ್ರೆ ಹೊರಟು ನಿಂತಿದ್ದಾರೆ. ಅಪಾರ ಬಂದು, ಬಳಗ, ಆಪ್ತರು ಮತ್ತು ಅಭಿಮಾನಿಗಳನ್ನು ಬಿಟ್ಟು ಅವರು ಹೊರಟು ನಿಂತ ಈ ಒಂಟಿ ಯಾತ್ರೆಯಲ್ಲಿ ಅಲ್ಲಾಹು ಅವರಿಗೆ ಅನುಗ್ರಹ ನೀಡಲಿ. ಬರ್ಝಖಿ ಜೀವನ ಸ್ವರ್ಗ ಸಮೃದ್ದವಾಗಲಿ.
ಅವರ ಕುಟುಂಬ ವರ್ಗಕ್ಕೆ ಈ ವಿಯೋಗವನ್ನು ಸಹಿಸುವ ಶಕ್ತಿ ನೀಡಲಿ. ಅವರು ತೋರಿಸಿದ ಉತ್ತಮ ಹಾದಿಯಲ್ಲಿ ಅವರ ಉತ್ತರಾಧಿಕಾರಿಗಳೂ ಮುನ್ನಡೆಯುವಂತಾಗಲಿ.
ಆಮೀನ್ ಯಾ ರಬ್ಬಲ್ ಆಲಮೀನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.