ಕಾವೂರು(ವಿಶ್ವಕನ್ನಡಿಗ ನ್ಯೂಸ್): ಶಿವಳ್ಳಿ ಸ್ಪಂದನ ಕಾವೂರು ವಲಯದ ವತಿಯಿಂದ ಆಯೋಜಿಸಲ್ಪಟ್ಟ ಉಚಿತ ಆಯುಶ್ಮಾನ್ ಕಾರ್ಡ್ ನೊಂದಣಿ ಕಾರ್ಯಕ್ರಮವು ಶ್ರೀ ರಾಘವೇಂದ್ರ ಮಠ ಕಾವೂರು ಇಲ್ಲಿ ದಿನಾಂಕ 29-11-2020 ನೆ ರವಿವಾರದಂದು ಜರಗಿತು.ಮುಖ್ಯ ಅತಿಥಿಗಳಾಗಿ ತಾಲೂಕು ವಲಯ ಕಾರ್ಯದರ್ಶಿ ಶ್ರೀ ಗಣೇಶ ಹೆಬ್ಬಾರ್,ವಲಯ ಉಸ್ತುವಾರಿ ಶ್ರೀ ಪ್ರಸನ್ನ ಕುಮಾರ್, ಕಾವೂರು ವಲಯ ಅಧ್ಯಕ್ಷ ಶ್ರೀ ಪ್ರೇಮನಾಥ್ ರಾವ್,ಕಾರ್ಯದರ್ಶಿ ಶ್ರೀ ನಾಗರಾಜ್ ಭಟ್ ಕಾವೂರು ಬೀಡು,ಖಜಾಂಚಿ ಶ್ರೀ ದಾಮೋಧರ್ ಅಚಾರ್ಯ,ಸಂಘಟನಾ ಕಾರ್ಯದರ್ಶಿ ಶ್ರೀ ಅನೂಪ್ ಕುಮಾರ್,ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಶ್ರೀ ಗಣೇಶ ಹೆಬ್ಬಾರ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸುಮಾರು 100 ಕ್ಕೂ ಮಿಕ್ಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.