ಜೆದ್ದಾ(www.vknews.in): ಕೊರೊನಾ ವೈರಸ್ ಹರಡುವುದನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮಗಳು ಮತ್ತು ತಡೆಗಟ್ಟುವ ಪ್ರೋಟೋಕಾಲ್ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಸಾರ್ವಜನಿಕರಿಂದ ನಿಯಮ ಉಲ್ಲಂಘನೆಗಳ ಹಾಗೂ ನಿರ್ಲಕ್ಷ್ಯದ ವಿರುದ್ಧ ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ತಲಾಲ್ ಅಲ್-ಶಲ್ಹೌಬ್ ಅವರು ಎಚ್ಚರಿಕೆ ನೀಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕರ್ಫ್ಯೂ ಮರು ವಿಧಿಸುವ ನಿರ್ಧಾರ ಜನತೆಯ ಕೈಯಲ್ಲಿದೆ. ರಾಷ್ಟ್ರದ ಹಿತಕ್ಕಾಗಿ ಅಗತ್ಯವಿರುವಾಗ ಕರ್ಫ್ಯೂ ನಿರ್ಧಾರವನ್ನು ಅಂಗೀಕರಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ರಿಯಾದ್ ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಮತ್ತು ವೈರಸ್ ತಡೆಗಟ್ಟುವ ಪ್ರೋಟೋಕಾಲ್ಗಳನ್ನು ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿದರು.
“ಸರ್ಕಾರವು ನೀಡಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಕುರಿತಾದ ಎಚ್ಚರಿಕೆಗಳ ಹೊರತಾಗಿಯೂ, ಸಾರ್ವಜನಿಕರಿಂದ ನಿರಂತರವಾದ ಉಲ್ಲಂಘನೆ ಕಂಡು ಬರುತ್ತಿದ್ದು, ಈ ಬೆಳವಣಿಗೆ ದುರದೃಷ್ಟಕರ” ಎಂದು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.