ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ, ಪ್ರೇಮಾನಂದ ಶೆಟ್ಟಿಯವರಿಗೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ತಮ್ಮ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುವುದರೊಂದಿಗೆ ಅವರ ಅವಧಿಯಲ್ಲಿ ನಗರ ಪಾಲಿಕೆಯಲ್ಲಿನ ಅಭಿವೃದ್ಧಿಯಲ್ಲಿ ಉಜ್ವಲ ಪ್ರಗತಿ ಸಾಧಿಸಲಿಯೆಂದು ಶುಭ ಹಾರೈಸುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಇದೇ ಸಂಧರ್ಭದಲ್ಲಿ ನಿರ್ಗಮನ ಮೇಯರ್ ದಿವಾಕರ್ ಪಾಂಡೇಶ್ವರ ರವರ ಅವಧಿಯಲ್ಲಿನ ಆದ ಕೆಲವು ಅಭಿವೃದ್ಧಿಯ ಬಗ್ಗೆ ಶ್ಲಾಘಿಸಿ ಅವರ ಮುಂದಿನ ದಿನಗಳಲ್ಲಿಯೂ ಸಾಮಾಜಿಕ, ರಾಜಕೀಯ ಪ್ರಗತಿಗೆ ಶುಭಕೋರಿದರು ಮತ್ತು ಅವರ ಯೋಜನೆಯಲ್ಲಿದ್ದ ವಾರ್ಡ್ ಸಮಿತಿಯ ರಚನೆಯನ್ನು ಕೊನೆಯವರೆಗೂ ಅಸ್ತಿತ್ವಕ್ಕೆ ತರಲು ಅವರು ಯಶಸ್ವಿಯಾಗದಿದ್ದರೂ, ಹೊಸ ಮೇಯರ್ ರವರು ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕಾಗಿದೆಯೆಂದವರು ಹೇಳಿದರು.
ಈಗಾಗಲೇ ಪ್ರತಿ ವಾರ್ಡ್ ಗಳಲ್ಲಿನ ತಲಾ ಹತ್ತು ಜನರ ಸಮಿತಿಯ ರಚನೆಗಾಗಿ ಸಾಮಾಜಿಕ ಕಾರ್ಯ ಕ್ಷೇತ್ರದ ಆಸಕ್ತ ವ್ಯಕ್ತಿಗಳಿಂದ ಅರ್ಜಿ ಸಲ್ಲಿಸಲು ಕೇಳಿಕೊಂಡಿರುವುದರಿಂದ ಹಲವಾರು ಆಕಾಂಕ್ಷಿಗಳಿಂದ ಸಾಕಷ್ಟು ಅರ್ಜಿ ಫಾರಂ ತುಂಬಿಸಿ ನೀಡಲಾಗಿದ್ದು ಆದಷ್ಟು ಶೀಘ್ರದಲ್ಲೇ ಅದರಿಂದ ಅರ್ಹ ಹತ್ತು ಜನರನ್ನು ಆರಿಸಿ ಸದ್ರಿ ಸಮಿತಿಯನ್ನು ಅಸ್ತಿತ್ವಕ್ಕೆ ತರುವುದರೊಂದಿಗೆ ಮಹಾನಗರ ಪಾಲಿಕೆಯಲ್ಲಿನ ಎಲ್ಲಾ ಕ್ಷೇತ್ರದಲ್ಲೂ ಅಲ್ಲಿನ ಸಕಲ ಅಭಿವೃದ್ಧಿಯಲ್ಲಿಯೂ ಕ್ರಿಯಾಶೀಲವಾಗುವಲ್ಲಿ ಹೊಸ ಚಾಲನೆ ನೀಡಬೇಕಾಗಿದೆ. ಅದೇ ರೀತಿಯಲ್ಲಿ ನಾನು ಈ ಮೊದಲೇ ತಿಳಿಸಿರುವಂತೆ ರಾಜಾ ಕಾಲುವೆಯ ಬದಿಗೋಡೆಯ ದುರಸ್ತಿ ಕಾರ್ಯವನ್ನು ಮಾಜಿ ಮೇಯರ್ ಅವಧಿಯಲ್ಲೇ ಕೈಗೆತ್ತಿಕೊಂಡಿದ್ದ ಕೆಲಸವನ್ನು ಪೂರ್ತಿಗೊಳಿಸುವ ಜತೆಗೆ ಇದರಲ್ಲಿ ಸೇರುವ ತ್ಯಾಜ್ಯ ನೀರು ಅಲ್ಲಿ ಬರದಂತೆ ತಡೆದು ಪರಿಸರ ನಿವಾಸಿಗಳ ನೆಮ್ಮದಿಯ ಉಸಿರಾಟಕ್ಕೆ ಸಹಕರಿಸಬೇಕಾಗಿದೆಯೆಂದವರು ಹೇಳಿದರಲ್ಲದೆ, ರಾಜಾ ಕಾಲುವೆಯು ಮಾಜಿ ಹಾಗೂ ಹಾಲಿ ಮೇಯರ್ ರವರ ವಾರ್ಡ್ ಗಳ ಮೂಲಕವೇ ಹರಿದು ಹೋಗುವುದಾಗಿದೆಯೆಂಬುವುದಾಗಿಯೂ ತಮ್ಮ ಹೇಳಿಕೆಯಲ್ಲಿ ಅವರು ನೆನಪಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.