ಕಾಸರಗೋಡು(ವಿಶ್ವಕನ್ನಡಿಗ ನ್ಯೂಸ್): ಕಾಸರಗೋಡು ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎನ್ ಎ ನೆಲ್ಲಿಕುನ್ನು ಪರವಾಗಿ ಮುಂಬಯಿ ಉದ್ಯಮಿ ಆದೂರಿನ ಗಣೇಶ್ ಶೆಟ್ಟಿ ಅವರ ಮನೆಯಲ್ಲಿ ಚುನಾವಣಾ ಸಭೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರಚಾರ ಸಭೆಯಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ವಿಜ್ಞಾನ ಖಾತೆ, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರು ಕಾಸರಗೋಡು ಜಿಲ್ಲಾ ಎಐಸಿಸಿ ಚುನಾವಣಾ ವೀಕ್ಷಕರು ಆಗಿರುವ ರಮಾನಾಥ ರೈ ಭಾಗವಹಿಸಿ ಯುಡಿಎಫ್ ಅಭ್ಯರ್ಥಿ ಪರ ಮತ ನೀಡಲು ಮತದಾರರನ್ನು ಸೆಳೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
ಎಐಸಿಸಿ ವೀಕ್ಷಕರಾಗಿ ಮೂವಟ್ಟುಪುಳ ವಿಧಾನಸಭಾ ಕ್ಷೇತ್ರಕ್ಕೆ ನೇಮಕರಾಗಿರುವ ಕಾವು ಹೇಮನಾಥ್ ಶೆಟ್ಟಿ ಅವರು ಮಾತನಾಡಿ ಕರ್ನಾಟಕ ಹಾಗೂ ಕೇರಳ ಗಡಿಪ್ರದೇಶದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುವ ಮೂಲಕ ಜನೋಪಯೋಗಿ ಶಾಸಕರಾಗಿರುವ ಕಾಸರಗೋಡು ಅಭ್ಯರ್ಥಿ ಎನ್ ಎ ನೆಲ್ಲಿಕುನ್ನು ಅವರನ್ನು ಮತ್ತೊಮ್ಮೆ ಕೇರಳ ವಿಧಾನಸಭೆಗೆ ಅಯ್ಕೆ ಮಾಡಬೇಕೆಂದು ಕರೆ ನೀಡಿದರು.
ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಚುನಾವಣಾ ಪ್ರಚಾರಕಿ ಶ್ರೀ ಮತಿ ಅನಿತಾ ಹೇಮನಾಥ್ ಶೆಟ್ಟಿಯವರು ಮಾತನಾಡಿ ಕೇಂದ್ರ ಬಿಜೆಪಿ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಪ್ರಾಣ ಹಿಂಡುತ್ತಿದ್ದೆ. ಜನ ಸಾಮಾನ್ಯ ಜೀವನ ತತ್ತರಿಸುತ್ತಿದೆ. ರಾಜ್ಯದ ಕಮ್ಯೂನಿಸ್ಟ್ ಸರಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದಕ್ಕೆಲ್ಲಾ ಪೂರ್ಣವಿರಾಮ ಹಾಕಲು ಮತ್ತೊಮ್ಮೆ ನಮ್ಮ ಶಾಸಕರು ಎನ್ ಎ ನೆಲ್ಲಿಕುನ್ನು ಜಯಗಳಿಸಬೇಕು. ರಾಜ್ಯದಲ್ಲಿ ಯುಡಿಎಫ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಬೇಕೆಂದರು. ಹಾಲಿ ಶಾಸಕ,ಅಭ್ಯರ್ಥಿ ಎನ್ ಎ ನೆಲ್ಲಿಕುನ್ನು ತನ್ನನ್ನು ಗೆಲ್ಲಿಸುವಂತೆ ವಿನಂತಿ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.