ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೇರಳ ಜಂಯತುಲ್ ಉಲಮಾ ಉಪಾಧ್ಯಕ್ಷರು, ಸೂಫಿ ವರ್ಯರು ಸಮುದಾಯದ ಮತ್ತು ಸಮಾಜದ ನಾಯಕರು ಆಗಿದ್ದು ಸಮುದಾಯದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದ ಶೈಖುನಾ ಎಂ.ಆಲಿಕುಂಞಿ ಉಸ್ತಾದ್ ಮುಸ್ಲಿಯಾರ್ ಶಿರಿಯಾ ರವರ ನಿಧನ ವಾರ್ತೆಯು ಅತೀವ ನೋವನ್ನು ತಂದಿದ್ದುಇವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಅಪಾರ ವಿದ್ವಾಂಸರರನ್ನು ಸಮೂಹಕ್ಕೆ ಅರ್ಪಿಸಿದ್ದ ಶೈಖುನರನ್ನು ಸಮಾಜ ತಾಜುಶ್ಶೇರಿಅಃ ಎಂದು ಕರೆಯುತ್ತಿತ್ತು.ಹಲವಾರು ಮಸೀದಿಗಳ ಖಾಝಿಯಾಗಿರುವ ಶೈಖುನರವರು ಹಲವಾರು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಪೊಯ್ಯತ್ತಬೈಲ್ ನಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಾ ಬಂದಿದ್ದರು,ಅಲ್ ಬಯಾನ್ ಪತ್ರಿಕೆ ಸಂಪಾದಕರು ಆಗಿದ್ದ ಇವರ ಅಗಲುವಿಕೆಯು ಸಮಯದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆ.
ಅಲ್ಲಾಹ್ ನು ಅವರ ಪಾರತ್ರಿಕ ಲೋಕವನ್ನು ವಿಜಯಗೊಳಿಸಲಿ ಮತ್ತು ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಶಿಷ್ಯರಿಗೆ ಮತ್ತು ಅಭಿಮಾನಿಗಳಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.
ಜಾಬಿರ್ ಅರಿಯಡ್ಕ (ಜಿಲ್ಲಾದ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.