ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೇರಳ ಜಂಯತುಲ್ ಉಲಮಾ ಉಪಾಧ್ಯಕ್ಷರು, ಸೂಫಿ ವರ್ಯರು ಸಮುದಾಯದ ಮತ್ತು ಸಮಾಜ ನಾಯಕರು, ಸಮುದಾಯದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದ ಶೈಖುನಾ ಎಂ.ಆಲಿಕುಂಞಿ ಉಸ್ತಾದ್ ಶಿರಿಯಾ ರವರ ನಿಧನ ವಾರ್ತೆಯು ಅತೀವ ನೋವನ್ನು ತಂದಿದ್ದು ಮಹಾನರ. ನಿಧನಕ್ಕೆ ಎಸ್.ವೈ.ಎಸ್ .ಎಸ್ ಎಸ್ ಎಫ್. ಹಿದಾಯತ್ ನಗರ ಶಾಖೆ. ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
ಅಪಾರ ಧಾರ್ಮಿಕ ವಿದ್ವಾಂಸರನ್ನು ಈ ಸಮೂಹಕ್ಕೆ ಅರ್ಪಿಸಿದ್ದ ಶೈಖುನಾ ಉಸ್ತಾದರನ್ನು ಸಮಾಜ ತಾಜುಶ್ಶೇರಿಅಃ ಎಂದು ಕರೆಯುತ್ತಿತ್ತು. ಹಲವಾರು ಮೊಹಲ್ಲಾಗಳ ಖಾಝಿಯಾಗಿರುವ ಶೈಖುನಾ ರವರು ಹಲವಾರು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಪೊಯ್ಯತ್ತಬೈಲ್ ನಲ್ಲಿ ಧಾರ್ಮಿಕ ವಿಧ್ಯಾಭ್ಯಾಸದ ದರ್ಸ್ ನಡೆಸುತ್ತಿದ್ದು ,ಅಲ್ ಬಯಾನ್ ಪತ್ರಿಕೆ ಸಂಪಾದಕರೂ ಆಗಿದ್ದರು. ಇವರ ಅಗಲುವಿಕೆಯು ಸಮಯದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.