ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಸರ್ವ ಧರ್ಮಗಳ ಪುಣ್ಯ ಕ್ಷೇತ್ರಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿರುವ ನಮ್ಮ ದ. ಕ. ಜಿಲ್ಲೆಯು ಸರ್ವ ಧರ್ಮಗಳು ಒಂದಾಗಿ ಸಹಬಾಳ್ವೆಯಲ್ಲಿ ಕಳೆದಿರುವ ಸಾಮರಸ್ಯ ಪರಂಪರೆಯನ್ನು ಹೊಂದಿರುವ ಇಲ್ಲಿನ ಮತೀಯ ಸೌಹಾರ್ಧತೆಯು ಈ ನಾಡಿನ ಜನರ ಬದುಕಿನ ಭಾಗ ಎಂಬುವುದು ಇಲ್ಲಿನ ಹಿರಿಯರೆಲ್ಲರಿಗೂ ತಿಳಿದಿರುವ ವಿಚಾರ, ಆದರೆ ಮುಂದಿನ ದಿನಗಳಲ್ಲಿ ಅದನ್ನು ಇಲ್ಲಿನ ಇತಿಹಾಸದ ಪುಟಗಳಲ್ಲಿ ಹುಡುಕುವ ಕಲಿಕೆಯ ಭಾಗ ಮಾತ್ರವಾಗಿಸದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆಯೆಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ, ಎಸ್. ಎಮ್. ಮುತ್ತಲಿಬ್ ರವರು ಈ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಶಾಂತಿಯನ್ನು ಕದಡುವ ದುಷ್ಕರ್ಮಿಗಳು ಯಾರೇ ಆಗಿದ್ದರೂ ಅವರ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ಜನಗಳು ಒಂದಾಗಬೇಕಿದೆ ಅದು ಪೊಲೀಸ್ ಕಮೀಷನ್ ರವರುಗಳ ನಿರ್ದಾಕ್ಷಿಣ್ಯ ಕ್ರಮಕ್ಕೆ ನೈತಿಕ ಬೆಂಬಲ ನೀಡಿದಂತಾಗುವುದಲ್ಲದೆ ಪೊಲೀಸ್ ಇಲಾಖೆಯು ಇಷ್ಟೊಂದು ದುಷ್ಟಶಕ್ತಿಗಳನ್ನು ಮಟ್ಟಹಾಕುವ ಪ್ರಯತ್ನಕ್ಕೆ ಸಾರ್ವಜನಿಕರು ಬಲ ನೀಡಿದಂತೆಯೂ ಆಗುತ್ತದೆ.
ಆದ್ದರಿಂದ, ಇತ್ತೀಚಿಗಿನ ಕೆಲವು ಉದಾಹರಣೆಗಳನ್ನು ಹೇಳಿದ ಅವರು ಅದು, ಕೊರಗಜ್ಜನ ಕ್ಷೇತ್ರದಲ್ಲಿ ಅಶ್ಲೀಲ ಬರಹ ಮತ್ತು ಅಲ್ಲಿನ ಹುಂಡಿಗೆ ನಿಂದ್ಯ ವಸ್ತುಗಳನ್ನು ಹಾಕಿದ ದುಷ್ಕರ್ಮಿಗಳು ಇರಬಹುದು ಅಂತೆಯೇ ಬೆಳ್ತಂಗಡಿ ಪರಿಸರದಲ್ಲಿ ಶಾಂತಿಭಂಗ ಮಾಡುವ ಘಾತುಕರಾಗಿರಬಹುದು ಅಥವಾ ಪಂಪ್ವೆಲ್ ನಲ್ಲಿನ ಅನೈತಿಕ ಪೊಲೀಸ್ ಗಿರಿಯ ಘಟನೆಯೇ ಇರಲಿ ಇದರ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗಿದೆಯೆಂದು ಹೇಳಿದರಲ್ಲದೆ, ಇತ್ಯಾದಿ ಸಮಾಜಕಂಟಕರ ಪರವಾಗಿ ಯಾವುದೇ ಸಮುದಾಯ ಅಥವಾ ಮತೀಯತೆಯೂ ಪರವಹಿಸುವುದಾಗಲಿ ರಾಜಕೀಯ ಪಕ್ಷಗಳು ಬೆಂಬಲಗಳು ನೀಡುವುದಾಗಲಿ ಮಾತ್ರವಲ್ಲ ನ್ಯಾಯವಾದಿಗಳು ವಕಾಲತ್ತು ವಹಿಸಲು ಮುಂದಾಗುವುದಾಗಲಿ ಸಲ್ಲದು ಮತ್ತು ಸರ್ವಜನರೂ ಇಲ್ಲಿನ ಶಾಂತಿಸೌಹಾರ್ಧತೆಯನ್ನು ಹಾಗೂ ಐಕ್ಯಮತೆಗೂ ಬದ್ದರಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ ಎಂದವರು ಈ ಸಂಧರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.