ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯ ಹಿಂದುಳಿದ ವರ್ಗ ಪ್ರವರ್ಗ ಅ ವಿಭಾಗಕ್ಕೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಹಿರಿಯ ಪತ್ರಕರ್ತ, ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಮುಹಮ್ಮದ್ ಆರಿಫ್ ಪಡುಬಿದ್ರಿ ಭರ್ಜರಿ ಜಯಗಳಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಮಂಗಳವಾರ ಚುನಾವಣೆ ನಡೆಯಿತು. ಎರಡು ಸ್ಥಾನಗಳಿಗೆ ಒಟ್ಟು ಏಳು ಮಂದಿ ಪ್ರಬಲ ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದರು.
ಒಟ್ಟು 209 ಮಂದಿ ಶೇರುದಾರರ ಪೈಕಿ 198 ಮಂದಿ ಮತದಾನ ಮಾಡಿ, ಶೇ.94.73 ಮತದಾನವಾಗಿತ್ತು. ಮುಹಮ್ಮದ್ ಆರೀಫ್ ಅತೀ ಹೆಚ್ಚು 91 ಮತಗಳನ್ನು ಪಡೆದು ವಿಜಯ ಸಾಧಿಸಿದರು. ವಿಜಯ ಕರ್ನಾಟಕ ಪತ್ರಿಕೆಯ ಇನ್ನೊಬ್ಬ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಪಡು ಎರಡನೇ ಅತೀ ಹೆಚ್ಚು 67 ಮತಗಳನ್ನು ಪಡೆದು ವಿಜಯ ಸಾಧಿಸಿದರು.
ಉಳಿದಂತೆ ನರೇಂದ್ರ ಎಂ.ಪೂಜಾರಿ- 27, ಮನೋಹರ ಬಳಂಜ- 34, ರಾಜೇಶ್ ಪೂಜಾರಿ- 60, ಮೊಹಮ್ಮದ್ ಅನ್ಸಾರ್ ಇನೋಳಿ- 49 ಹಾಗೂ ಸಿದ್ದಿಕ್ ನೀರಾಜೆ- 42 ಮತಗಳನ್ನು ಪಡೆದು ಪರಾಭವಗೊಂಡರು. ಒಟ್ಟು 15 ಸ್ಥಾನಗಳ ಪೈಕಿ, 9 ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ 12 ಮಂದಿ ಕಣದಲ್ಲಿದ್ದರು. ಶ್ರೀನಿವಾಸ್ ನಾಯಕ್ ಇಂದಾಜೆ ಅತೀ ಹೆಚ್ಚು- 177 ಆತ್ಮಭೂಷಣ್ ಭಟ್- 118, ಇಬ್ರಾಹಿಂ ಅಡ್ಕಸ್ಥಳ-139, ಜಿತೇಂದ್ರ ಭಟ್- 127, ಸುಖ್ಪಾಲ್ ಪೊಳಲಿ- 146, ಭಾಸ್ಕರ ರೈ ಕಟ್ಟ- 167, ಪುಷ್ಪರಾಜ್ ಬಿ.ಎನ್.-157, ಕೇಶವ ಕುಂದರ್-115 ಹಾಗೂ ವಿಲ್ಫ್ರೆಡ್ ಡಿಸೋಜ- 127 ಮತಗಳಿಂದ ವಿಜಯಿಯಾದರು. ಅಶೋಕ್ ಶೆಟ್ಟಿ (48), ಎಸ್.ಜಯರಾಮ್ (57), ರವಿಚಂದ್ರ ಬಿ. (88) ಮತಗಳನ್ನು ಮಾತ್ರ ಪಡೆದು ಸೋಲನುಭವಿಸಿದ್ದಾರೆ. ಪರಿಶಿಷ್ಟ ಜಾತಿ ವಿಭಾಗದಲ್ಲಿ ಸುರೇಶ್ ಪಳ್ಳಿ, ಪರಿಶಿಷ್ಟ ಪಂಗಡ ವಿಭಾಗದಲ್ಲಿ ಹರೀಶ್ ಮೋಟುಕಾನ ಹಾಗೂ ಮಹಿಳಾ ಕ್ಷೇತ್ರಕ್ಕೆ ಸತ್ಯವತಿ ಹಾಗೂ ಶಿಲ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಹಕಾರಿ ಇಲಾಖೆಯ ಹಿರಿಯ ನಿರೀಕ್ಷಕ ಶಿವಲಿಂಗಯ್ಯ ಎಂ. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ವಾರ್ತಾ ಇಲಾಖೆ ಸಿಬ್ಬಂದಿ ಚುನಾವಣೆಗೆ ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.