ಮಂಗಳೂರು (www.vknews.com) : ದಿನಾಂಕ 27 – 04 – 2021 ಮಂಗಳವಾರ ಮಕ್ಕಿಮನೆ ಕಲಾವೃಂದ ಮಂಗಳೂರು ಇವರ ವತಿಯಿಂದ ಭಗವಾನ್ ಮಹಾವೀರರ ಜನ್ಮ ಕಲ್ಯಾಣೋತ್ಸವ ಹಾಗೂ ಭಗವಾನ್ ಮಹಾವೀರರ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರನ್ನು ಪ್ರಕಟಿಸುವ ಸಮಾರಂಭ ಸಂಜೆ ಏಳಕ್ಕೆ ಆನ್ಲೈನ್ ಮಾಧ್ಯಮದ ಮೂಲಕ ಮಕ್ಕಿಮನೆ ಕಲಾವೃಂದ ಫೇಸ್ಬುಕ್ ಪೇಜಿನಲ್ಲಿ ನಡೆಯಿತು.
ಪ. ಪೂ. ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನಗೈದು ಭಗವಾನ್ ಮಹಾವೀರರ ಸಂದೇಶದ ಪಾಲನೆಯಾಗಿ ಜಗತ್ತಿನಲ್ಲಿ ಸುಖ ಶಾಂತಿ ನೆಲೆಸಲಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ಪಿ ಪಿ ಹೆಗ್ಡೆ ಮಾತನಾಡಿ ಮಕ್ಕಿಮನೆ ಕಲಾವೃಂದದವರು ಭಗವಾನ್ ಮಹಾವೀರರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿ ಭಗವಾನ್ ಮಹಾವೀರರನ್ನು ಎಲ್ಲರಿಗೂ ಪರಿಚಯಿಸುವಂತೆ ಮಾಡಿರುವುದು ಪ್ರಶಂಸನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಧರ್ಮಸ್ಥಳ ಮಾತನಾಡಿ ಭಗವಾನ್ ಮಹಾವೀರರ ಸಂದೇಶ ಹಿಂಸಾತ್ಮಕ ಜಗತ್ತಿಗೆ ಅಹಿಂಸೆಯ ಮೂಲಕ ಶಾಂತಿಯನ್ನು ತರಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಪ್ರಸನ್ನ ಕುಮಾರ್ ಮೈಸೂರು , ಮಹಾವೀರ್ ಜೈನ್ ಎಳನೀರು, ಅಶ್ವಥ್ ಕುಮಾರ್ ಜೈನ್ ಶ್ರೀಲಂಕಾ, ಜೈನ್ ಟ್ರಾವೆಲ್ಸ್ ಮಾಲಿಕ ರತ್ನಾಕರ್ ಜೈನ್ ಮಂಗಳೂರು, ಶ್ವೇತಾ ಜೈನ್ ವಕೀಲರು ಮೂಡುಬಿದಿರೆ, ಚಿತ್ರ ಕಲಾವಿದ ಚಿತ್ತಾ ಜಿನೇಂದ್ರ ಬೆಂಗಳೂರು, ಮಾಳ ಹರ್ಷೇಂದ್ರ ಜೈನ್ ಬೆಂಗಳೂರು, ಯುವ ಅಜಿತ್ ಬೆಂಗಳೂರು, ಪ್ರೊ. ಅಜಿತ್ ಪ್ರಸಾದ್ ಮೂಡುಬಿದಿರೆ ಭಾಗವಹಿಸಿ ಶುಭಕೋರಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಹೊರನಾಡು ಅವರಿಂದ ಭಗವಾನ್ ಮಹಾವೀರ ಭಜನಾ ಕಾರ್ಯಕ್ರಮವು ನಡೆಯಿತು.
ಭಗವಾನ್ ಮಹಾವೀರರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪ್ರಿಯಾಂಕ ಜೈನ್ ಕೊಡೂರು ಸಾಗರ, ದ್ವಿತೀಯ ಸ್ಥಾನವನ್ನು ಶ್ವೇತಾ ಸಂತೋಷ್ ಗೋಗಿ ಬೆಂಗಳೂರು ಹಾಗೂ ತೃತೀಯ ಸ್ಥಾನವನ್ನು ಶ್ವೇತಾ ಜೈನ್ ಕೊಳೆಗೋಡು ಸಾಗರ ಮತ್ತು ಸೌಮ್ಯ ಜೈನ್ ಕೊಡೂರು ಸಾಗರ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಮಕ್ಕಿಮನೆ ಕಲಾವೃಂದ ಮಂಗಳೂರು ಇದರ ಸುದೇಶ್ ಜೈನ್ ಮಕ್ಕಿಮನೆ ಕಾರ್ಯಕ್ರಮ ಆಯೋಜಿಸಿದ್ದರು. ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಿತ್ರಸೇನ್ ಜೈನ್ ಅಳದಂಗಡಿ ಮಂಗಲಾಚರಣೆ ಹಾಡಿದರು. ಶ್ರೀಮತಿ ಸ್ಪೂರ್ತಿ ಜೈನ್ ಬೆಂಗಳೂರು ಧನ್ಯವಾದ ಸಮರ್ಪಿಸಿದರು. ಮಹಾವೀರ್ ಜೈನ್ ಹೊರನಾಡು ಶಾಂತಿ ಮಂತ್ರ ಪಠಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.