(www.vknews.com) : ವರ್ಷದ ಹನ್ನೆರಡು ತಿಂಗಳುಗಳ ಪೈಕಿ ಪರಮ ಶ್ರೇಷ್ಠವಾದ ತಿಂಗಳು ರಂಝಾನ್. ಈ ತಿಂಗಳ ಸರ್ವ ಆರಾಧನಾ ಕರ್ಮಗಳಿಗೂ ದುಪ್ಪಟ್ಟು ಪ್ರತಿಫಲ ಲಭ್ಯ. ಮನುಷ್ಯ ಹೃದಯದಲ್ಲಿನ ಅಹಂಭಾವ, ಅಹಂಕಾರ, ದ್ವೇಷ, ಹಗೆತನ, ಅಸೂಯೆ,ದುಶ್ಚಿಂತೆ ಇತ್ಯಾದಿಗಳನ್ನು ತೆಗೆದು ಬಿಸಾಕಿ ಶಾಂತಿ, ಸಹನೆ, ಸ್ನೇಹ, ಪ್ರೀತಿ, ವಿಶ್ವಾಸ, ಭಕ್ತಿ ಇತ್ಯಾದಿ ಸದ್ಗುಣಗಳಿಂದ ಆತ್ಮವನ್ನು ಶುದ್ಧೀಕರಿಸುವ ರಂಝಾನ್ ಪುಣ್ಯಗಳ ಕೊಯ್ಲುಕಾಲವಾಗಿದೆ.ಪರದೂಷಣೆ,ಪರನಿಂದನೆ,ಪರಿಹಾಸ,ಅಸತ್ಯ,ಅಸಭ್ಯ ಮಾತುಗಳಿಂದ ನಾಲಗೆಯನ್ನು ಹಿಡಿತದಲ್ಲಿಟ್ಟು, ಅಕ್ರಮ, ಅನೈತಿಕತೆ,ಅಶ್ಲೀಲತೆ,ಅಧಾರ್ಮಿಕತೆ ಗಳಿಂದ ಶರೀರವನ್ನು ರಕ್ಷಿಸಿ, ಪರೋಪಕಾರ,ಸತ್ಕರ್ಮ,ಉದಾರತೆ,ದಾನ ಧರ್ಮ ಗಳಿಂದ ಸತ್ಪ್ರಜೆ ಯಾಗಿ ಬಾಳಲು ಪ್ರೇರಣೆ ನೀಡುವ ತಿಂಗಳಾಗಿದೆ ರಂಝಾನ್.ಉಪವಾಸ ಅಲ್ಲಾಹನ ಸಂಪ್ರೀತಿ ಗಳಿಸುವ ಪ್ರಮುಖ ಆರಾಧನೆ.ವೃತವು ಆರೋಗ್ಯಕ್ಕೆ ಉತ್ತಮ ದಾರಿ.
ಕೋವಿಡ್ 19 ಮಹಾಮಾರಿ ಜನ ಬದುಕನ್ನು ತಾಳತಪ್ಪಿಸಿದೆ. ಮುಂಜಾಗ್ರತೆಗಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ಅದರ ಪಾಲನೆ ನಮ್ಮ ಪಾಲಿನ ಕಡ್ಡಾಯ. ಈಗಾಗಲೇ ಸರ್ವಧರ್ಮದವರೂ ತಮ್ಮ ಆರಾಧನಾಲಯಗಳಿಂದ ಹೊರಬಂದು ಮನೆಯನ್ನೇ ಆರಾಧನಾ ಕೇಂದ್ರವಾಗಿ ಸಧ್ಯಕ್ಕೆ ಒಪ್ಪಿಕೊಂಡಿದ್ದಾರೆ.ಮುಸ್ಲಿಂ ಜಗತ್ತು ರಂಝಾನ್ ತಿಂಗಳಲ್ಲಿ ಆರಾಧನಾ ಕರ್ಮಗಳಿಗೆ ಅತೀ ಹೆಚ್ಚು ಮಸೀದಿಯನ್ನು ಅವಲಂಬಿಸುವುದು ರೂಡಿ. ಆದರೂ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅದನ್ನು ಕೈ ಬಿಟ್ಟು ಸರಕಾರದ ಮತ್ತು ಧಾರ್ಮಿಕ ವಿದ್ವಾಂಸರ ಆದೇಶ ಪಾಲಿಸಿ ಮನೆಯಲ್ಲೇ ಆರಾಧನಾ ಕರ್ಮಗಳಲ್ಲಿ ತಲ್ಲೀನರಾಗಿರುತ್ತಾರೆ.ಖಂಡಿತವಾಗಿಯೂ ಕೊರೋಣವನ್ನು ಸದೆಬಡಿಯಲೇಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸರಕಾರದ, ಆರೋಗ್ಯ ಇಲಾಖೆಯ,ವಿದ್ವಾಂಸರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸೋಣ.ದೇಶದ ಒಳಿತಿಗಾಗಿ ಪ್ರಾರ್ಥಿಸೋಣ.ಸರ್ವರಿಗೂ ಒಳಿತಾಗಲಿ….
ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮುಅಲ್ಲಿಂ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ ಸುಳ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.