(ವಿಶ್ವ ಕನ್ನಡಿಗ ನ್ಯೂಸ್) : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ವತಿಯಿಂದ ರೌಫ್ ಶರೀಫ್ ರವರಿಗೆ ಸೂಕ್ತ ಚಿಕೆತ್ಸೆ ನೀಡುವಂತೆ ಕೋರಿ ಮತ್ತು ಶೀಘ್ರ ಬಿಡುಗಡೆ ಮಾಡುವಂತೆ ಕನ್ನಂಗಾರ, ಹೊನ್ನಾಳ, ಬೈಲೂರು, ಎನ್ನೆಹೊಳೆ ಮತ್ತು ಕಾರ್ಕಳ ವ್ಯಾಪ್ತಿಯಲ್ಲಿ ಪ್ಲೆ ಕಾರ್ಡ್ ಪ್ರದರ್ಶನ ಮಾಡಲಾಯಿತು.
ಉಡುಪಿ: ಏಪ್ರಿಲ್ 29 ಅನ್ಯಾಯವಾಗಿ ಯುಪಿ ಯ ಮಥುರಾ ಜೈಲಿನಲ್ಲಿರುವಂತಹ ಅಮಾಯಕ ವಿದ್ಯಾರ್ಥಿ ನಾಯಕ ರೌಫ್ ಶರೀಫ್ ರವರ ಬಂಧನವನ್ನು ಖಂಡಿಸಿ ಮತ್ತು ಇದೀಗ ಮಥುರಾ ಜೈಲಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು ಯಾವುದೇ ಚಿಕಿತ್ಸೆಯನ್ನು ನೀಡದೆ ಇರುವಂತಹ ಯು ಪಿ ಪೊಲೀಸರ ಮತ್ತು ಸರಕಾರದ ನಡೆಯನ್ನು ಖಂಡಿಸಿ ದೇಶಾದ್ಯಂತ ಸಿ.ಎಫ್.ಐ ಅಭಿಯಾನ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕನ್ನಂಗಾರ್, ಹೊನ್ನಾಳ, ಬೈಲೂರು, ಎನ್ನೆಹೊಳೆ ಮತ್ತು ಕಾರ್ಕಳದಲ್ಲಿ ವಿದ್ಯಾರ್ಥಿಗಳು ಪ್ಲೆ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.