ಚಿಕ್ಕಬಳ್ಳಾಪುರ (www.vknews.com):- ನಗರದಲ್ಲಿರುವ ಡಿವೈಎಸ್ಪಿ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗೆ ಡಾ ಕೆ ಸುಧಾಕರ್ ಅಭಿಮಾನಿ ಬಳಗದಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಯುವ ಮುಖಂಡ ಎಸ್.ಪಿ.ಶ್ರೀನಿವಾಸ್ ಸುಮಾರು ಒಂದೂವರೆ ವರ್ಷಗಳಿಂದ ಇಡೀ ರಾಜ್ಯಾದ್ಯಂತ ದೇಶಾದ್ಯಂತ ಕೊರೋನಾ ಮಹಮ್ಮಾರಿಯಿಂದ ಜನತೆ ತತ್ತರಿಸಿ ಹೋದರು ನಮ್ಮ ಪೊಲೀಸ್ ಇಲಾಖೆಯು ಮಾತ್ರ ತಮ್ಮ ಪ್ರಾಣ ಕುಟುಂಬಗಳನ್ನು ಲೆಕ್ಕಿಸದೆ ಹಗಲಿರುಳು ನಮ್ಮ ಜನರಿಗಾಗಿ, ನಮ್ಮ ಜನರ ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿರುವುದು ಅವಿಸ್ಮರಣೀಯ ಎಂದರು.
ಪೊಲೀಸ್ ಸಿಬ್ಬಂದಿ ಮೇಲೆ ಎಷ್ಟೇ ಆರೋಪಗಳು ಬಂದರು ಯಾವುದನ್ನೂ ಲೆಕ್ಕಿಸದೆ ಜನಸೇವೆ ತೊಡಗಿಸಿಕೊಂಡಿರುವುದು ಅವರುಗಳ ಸೇವೆಯಲ್ಲಿನ ವ್ಯಕ್ತಿತ್ವದ ಕೈಗನ್ನಡಿ. ಇಡೀ ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿದ್ದ ನೂರಾರು ಮಂದಿ ಪೊಲೀಸ್ ಸಿಬ್ಬಂದಿಯವರು ನಮ್ಮ ಜನತೆಗಾಗಿ ತಮ್ಮ ಪ್ರಾಣಗಳನ್ನು ತ್ಯಜಿಸಿದ್ದಾರೆ ಅಂತಹ ಕುಟುಂಬಗಳಿಗೆ ಭಗವಂತ ನೋವನ್ನು ಮರೆಸುವ ಶಕ್ತಿ ನೀಡಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಬಯಸಿದರು.
ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಸಚಿವರಾದ ಸುಧಾಕರ್ ಅಣ್ಣನವರ ಸ್ವಂತ ಜಿಲ್ಲೆ ಹಾಗೂ ಉಸ್ತುವಾರಿ ಜಿಲ್ಲೆಯು ಆಗಿದ್ದರಿಂದ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಗಳಿಂದ ಹಿಡಿದು ಹೋಂ ಗಾರ್ಡ್ ವರೆಗೂ ಎಲ್ಲರೂ ಸಹ ಸರ್ಕಾರದ ಮಾರ್ಗಸೂಚಿ ಗಳಂತೆ ಬಿಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಇಡೀ ಜಿಲ್ಲೆಯಾದ್ಯಂತ ಕಡಿಮೆಯಾಗಲು ಅತ್ಯುತ್ತಮ ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಡಿ ವೈ ಎಸ್ ಪಿ ರವಿಶಂಕರ್, ಮಾಜಿ ನಗರಸಭಾ ಅಧ್ಯಕ್ಷರುಗಳಾದ ಅಪ್ಪಾಲು ಮಂಜುನಾಥ್, ಮುನಿಕೃಷ್ಣ ಪೇರಿಕಲ್ ಮಂಜುನಾಥ್, ಓಬಿಸಿ ತಾಲೂಕು ಅಧ್ಯಕ್ಷ ಮೊಬೈಲ್ ಬಾಬು, ಸಂಚಾರಿ ಪೊಲೀಸ್ ಠಾಣೆ ಎ ಎಸ್ ಐ ವೇಣು, ನಗರಸಭಾ ಸದಸ್ಯರಾದ ಸಂತೋಷ್, ತರಕಾರಿ ವೆಂಕಟೇಶ್, ತಾಲೂಕು ಉಪಾಧ್ಯಕ್ಷರಾದ ಬಿ.ವಿ.ಆನಂದ್ ಯುವ ಮುಖಂಡರಾದ ವಕೀಲ ಬಿ.ಆರ್.ಮಹೇಶ್, ಹರ್ಷವರ್ಧನ್, ಪೊಲೀಸ್ ಸಿಬ್ಬಂದಿ ನಾರಾಯಣಸ್ವಾಮಿ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.