ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಗ್ರಾಮೀಣ ಭಾಗದ ಜನರು ಜಾಗೃತಿ ವಹಿಸಿ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ನಿಮ್ಮ ಗ್ರಾಮಗಳನ್ನು ಕೊರೋನು ಮುಕ್ತರಾಗಿಸಿ ಎಂದು ಶಾಸಕರಾದ ಕೆ.ಆರ್.ರಮೇಶ್ ಕುಮಾರ್ ಸಲಹೆ ನೀಡಿದರು. ರಾಯಲ್ಪಾಡಿನ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಕರ್ನಾಟಕ ಪ್ರದೇಶ ಬಲಿಜಗರ ಸಂಘದ ವತಿಯಿಂದ ನೀಡಿದ ೨.೫ ಲಕ್ಷ ಮೌಲ್ಯದ ೧ ಆಕ್ಸಿಜನ್ ಕಾನ್ಸನ್ಟೇಟರ್ , ಜೀವರಕ್ಷಕ ಔಷಧಿಗಳು ಹಾಗೂ ಇತರೆ ಸುರಕ್ಷ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದರು . ಕೊರೋನಾ ಹೆಮ್ಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಕರ್ತವ್ಯ ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗು ಆಶಾ ಕಾರ್ಯಕರ್ತೆಯರು ಕಾರ್ಯವು ಬಹು ಮುಖ್ಯವಾದದ್ದು , ಇವರು ತಮ್ಮ ಪ್ರಾಣದ ಹಂಗನ್ನು ತೊರೆದು ಕೊರೋನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದು , ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರಲು ಶ್ರಮಿಸುತ್ತಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ಷಪಡಿಸದರು .
ಈ ದಿನ ದಾನಿಗಳು ನೀಡಿರುವ ಜೀವ ಔಷಧಿಗಳನ್ನು ವೈದ್ಯರ ಸಲಹೆಯಂತೆ ಆಶಾ ಕಾರ್ಯಕರ್ತೆಯರ ಹಾಗು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಾಗರೀಕರಿಗೆ ವಿತರಿಸುವಂತೆ ಸಲಹೆ ಸೂಚಿಸಿದರು . ಇಂತಹ ಪರಿಸ್ಥಿತಿಯಲ್ಲಿ ಹಲವಾರು ಸಂಘಟನೆಗಳು , ಸಂಘ ಸಂಸ್ಥೆಗಳು ದಾನಿಗಳು ಸಮಾಜ ಸೇವಕರು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದು , ಕಷ್ಟ ಕಾಲದಲ್ಲಿ ದಾನಿಗಳು ಸಮುದಾಯಕ್ಕೆ ಇಂತಹ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರಬೇಕು ಎಂದು ತಿಳಿಸಿದರು .
ರಾಜ್ಯ ಬಲಿಜಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಜಗದೀಶ್ , ಸದಸ್ಯರಾದ ಜಿ.ಎಂ. ದಿವಾಕರ್ ಸತ್ಯನಾರಾಯಣ , ಆದಿಶೇಷ , ಕುಮಾರ್ ಗ್ರಾ.ಪಂ.ಅಧ್ಯಕ್ಷ ಅರುಣವಂಕಟ್ , ಪಿಡಿಒ ನರೇಂದ್ರಬಾಬು , ಸದಸ್ಯರಾದ ಆರ್.ಗಂಗಾದರ್ , ಅಶೋಕ್.ನಾಗೇಶ್ , ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ , ಮುಖಂಡರಾದ ಸಿ.ವಿ.ಸೀತಾರಾಂ , ನರೇಶ್ ಶಿವು , ಮರಿಮಾಕಂಪಲಿ ವೇಣು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ್ಪ , ಮುಖಂಡರಾದ ಸಿ.ಮೀಸೀತಾರಾಂ , ನರೀಶ್ , ಶಿವು . ಮರಿಮಾಕಲಪಲ್ಲಿ ವೇಣು, ವೈದ್ಯಾಧಿಕಾರಿ . ಶಂಕರಪ್ರಸಾದ್ ಇತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.