(www.vknews.com) : ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೋಳಂತೂರು ಪರಿಸರದಲ್ಲಿ, ಸೇವಾ ರಂಗದಲ್ಲಿ ತನ್ನ ಚಾಪನ್ನು ಮೂಡಿಸಿ, ಬಡ,ನಿರ್ಗತಿಕ,ಅನಾಥ ಕುಟುಂಬಗಳಿಗೆ ಆಸರೆಯಾಗಿ ಬಹಳಷ್ಟು ಕಾರುಣ್ಯ ಸೇವೆಯೊಂದಿಗೆ ಮುನ್ನುಗ್ಗುತ್ತಿದ್ದು, ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೋಳಂತೂರು ವ್ಯಾಪ್ತಿಯ ಸುಮಾರು 100 ಕ್ಕೂ ಅಧಿಕ ಕುಟುಂಬ ಗಳಿಗೆ ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಹಿಂದೂ ಮುಸ್ಲಿಮರೆಂಬ ಭೇಧಭಾವವಿಲ್ಲದ ಟ್ರಸ್ಟ್ ನ ಸೇವಾಕಾರ್ಯವು ಸರ್ವ ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಟ್ರಸಿನ ಅಧ್ಯಕ್ಷ ಶೆರೀಫ್ ಎನ್.ಸಿ.ರೋಡ್, ಉಪಾಧ್ಯಕ್ಷ ಸಿದ್ಧೀಕ್ ಕುಡುಂಬಕೋಡಿ, ಕಾರ್ಯದರ್ಶಿ ಖಾದರ್, ಖಜಾಂಜಿ ಶೆರೀಫ್ ಸರಪಾಡಿ, ಹಾರಿಸ್ ನಾರಂಕೋಡಿ, ರಫೀಕ್ ನಾರಂಕೋಡಿ, ಅಮೀರ್ ಮಜಲುಕೋಡಿ, ಕಬೀರ್ ಎನ್.ಸಿ.ರೋಡ್, ಬಶೀರ್ ಶಿವಮೊಗ್ಗ, ಕಲಂದರ್ ಶಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.