ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ):- ಕೋವಿಡ್ ನಂತರ ಶಾಲೆಗಳು ಆರಂಭವಾಗಿದ್ದು , ಶಾಲಾ ಸ್ವಚ್ಛತೆಗೆ ಒತ್ತು ನೀಡುವಂತಹ ಸೂಚಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಇಂದು ತಾವೇ ಸ್ವತಃ ತಾಲ್ಲೂಕಿನ ಚಾಕರಸನಹಳ್ಳಿ ಶಾಲಾ ಆವರಣ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಶಿಕ್ಷಕರಿಗೆ ಮಾದರಿಯಾದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು , ಕೋವಿಡ್ ಹೆಮ್ಮಾರಿಯಿಂದಾಗಿ ಮುಚ್ಚಿದ್ದ ಶಾಲೆಗಳು ಮತ್ತೆ ತೆರೆಯಲಾಗಿದ್ದು , ಮಕ್ಕಳ ಕಲರವ ಸನ್ನಿಹಿತವಾಗಿದೆ . ಈ ಹಿನ್ನಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಜೂ .೧೫ ರಿಂದಲೇ ಚಾಲನೆ ನೀಡಲಾಗಿದ್ದು , ಶಿಕ್ಷಕರು ಶಾಲಾ ಸ್ವಚ್ಛತೆ ಮೊದಲು ಆದ್ಯತೆ ನೀಡುವಂತೆ ಕರೆ ನೀಡಿದರು .
ವಾರಿಯರ್ ರೀತಿ ಶಿಕ್ಷಕರು ಕೆಲಸ ಮಾಡಿ ಕೊಪಿಡ್ ವಾರಿಯರ್ ಜೀವದ ಹಂಗು ತೊರೆದು ಕೆಲಸ ಮಾಡಿದಂತೆ ಶಿಕ್ಷಕರು ಕೆಲಸ ಮಾಡಬೇಕು , ಶಾಲೆಗಳ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಶ್ರಮವಹಿಸಬೇಕು ಎಂದರು . ಶಾಲೆಗಳು , ಆವರಣ , ಶೌಚಾಲಯ ಸ್ವಚ್ಛತೆಗೆ ಕ್ರಮ ವಹಿಸಿ ಆವರಣದಲ್ಲಿ ಬೆಳೆದಿರುವ ಗಿಡಗಂಟೆಪಾರ್ಥನಿಯಂ ತೆರವುಗೊಳಿಸಿ , ಮಕ್ಕಳು ಖುಷಿಯಿಂದ ಶಾಲೆಯ ಕಡೆ ಬರುವ ವಾತಾವರಣ ನಿರ್ಮಿಸಿ ಎಂದು ಸೂಚಿಸಿದರು .
ಈಗಾಗಲೇ ಕೋವಿಡ್ ನಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗಿದ್ದಾರೆ . ಅವರಲ್ಲಿ ಮತ್ತೆ ಕಲಿಕಾಸಕ್ತಿ ಬೆಳೆಸುವ ಹೊಣೆ ಶಿಕ್ಷಕರದ್ದಾಗಿದೆ ಎಂದ ಅವರು , ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಮುಂದಾಗಿ ಎಂದು ಕಿವಿಮಾತು ಹೇಳಿದರು. ಶಾಲೆಯಲ್ಲಿ ಹಳೆಯ ವಸ್ತುಗಳು , ವ್ಯರ್ಥ ಪದಾರ್ಥಗಳನ್ನು ಎಸ್ಡಿಎಂಸಿ ಅನುಮತಿ ಪಡೆದು ಹರಾಜು ಹಾಕಲು ಸೂಚಿಸಿದ್ದು , ಇನ್ನೂ ಕೆಲವು ಶಾಲೆಗಳು ಈ ಕಾರ್ಯ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು , ಇದು ಕೊನೆಯ ಸೂಚನೆ ಎಂದು ಎಚ್ಚರಿಸಿದರು .
ಶಾಲಾ ದಾಖಲಾತಿ ಆಂದೋಲನ ನಡೆಸಿ , ಶಿಕ್ಷಕರು ಮಕ್ಕಳನ್ನು ಶಾಲೆಗೆ ಸೆಳೆಯಲು ಶಾಲಾ ದಾಖಲಾತಿ ಆಂದೋಲನ ನಡೆಸಲು ಸೂಚಿಸಿದ ಅವರು , ಯಾವುದೇ ಮಗು ಕಲಿಕೆಯಿಂದ ವಂಚಿತವಾಗಬಾರದು . ಈ ನಿಟ್ಟಿನಲ್ಲಿ ಎಚ್ಚರವಹಿಸಿ ಎಂದರು . ಶಾಲೆಗಳಿಗೆ ಅಗತ್ಯವಾದ ಮೂಲಸೌಲಭ್ಯ , ಸ್ವಚ್ಛತಾ ಕಾರ್ಯಗಳಿಗೆ ಗ್ರಾಮ ಪಂಚಾಯಿತಿಗಳ ಸಹಕಾರ ಪಡೆಯುವಂತೆ ಸೂಚಿಸಿದ ಅವರು , ಆನ್ ಲೈನ್ , ಆಫ್ ಲೈನ್ ಕ್ಲಾಸ್ಗಳನ್ನು ನಡೆಸಲು ಸಿದ್ದತೆ ನಡೆಸಿಕೊಳ್ಳಿ , ಅಗತ , ಕ್ರಿಯಾಯೋಜನೆ ರೂಪಿಸಿ ಎಂದು ಸೂಚಿಸಿದರು .
ಶಾಲಾ ಆರಂಭಕ್ಕೆ ಕೈಗೊಂಡಿರುವ ಸಿದ್ದತೆಗಳ ಕುರಿತು ಪರಿಶೀಲಿಸಲು ಬಿಇಒ ಅವರು ಒಂದೇ ದಿನ ಬೆಳಮಾರನಹಳ್ಳಿ ಚೌದ್ಧ , ಪ್ರಾಥಮಿಕ ಶಾಲೆಗಳು , ಚಾಕರಸನ್ನ ಹಳ್ಳಿ , ಬನಹಳ್ಳಿ , ನರಸಾಪುರ , ಕುರೆ , ಕಾಲನೂರು ಮತ್ತಿತರ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.