ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- ಕೊರೋನ ವಾರಿರ್ಯಸ್ಟ್ ಸ್ಥಾನದಲ್ಲಿ ನಿಂತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ದೇವರ ಸ್ಥಾನದಲ್ಲಿ ನಿಂತು ಸೋಂಕಿತರ ಸೇವೆ ಮಾಡುತ್ತಿದ್ದಾರೆ ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಹೇಳಿದರು .
ಕೋಲಾರ ನಗರದ ದರ್ಗಾ ಮೊಹಲ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಿಬ್ಬಂದಿಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿ , ವಿಶ್ವವನ್ನು ನಡುಗಿಸುತ್ತಿರುವ ಕೊರೋನ ವೈರಸ್ ಹೆಮ್ಮೆರಿಯಿಂದ ಸೋಂಕಿತರು ಆತಂಕಕ್ಕೀಡಾಗಿದ್ದು , ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ದೃತಿಗೆಡದೆ ಪಾಸಿಟಿವ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಸಿಬ್ಬಂದಿಗಳು ಕುಟುಂಬ ರಕ್ಷಣೆಯಲ್ಲಿ ತೊಡಗಿರುವ ಸೇವೆಯನ್ನು ಕಂಡು ಗೌರವಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು .
ಕೋವಿಡ್ -೧೯ ಸೋಂಕಿತರು ಕುಟುಂಬದಿಂದ ದೂರ ಉಳಿದು ಚಿಕಿತ್ಸೆಯನ್ನು ಪಡೆಯುತ್ತಿರುವ ಪಾಸಿಟಿವ್ ಸೋಂಕಿತರಿಗೆ ಯಾವುದೇ ತೊಂದರೆ ದೃತಿಗೆಡದಂತೆ , ಅವರಿಗೆ ಆರೋಗ್ಯ ಇಲಾಖೆಯಿಂದ ಹತ್ತಿರವಾಗಿ ಚಿಕಿತ್ಸೆಯನ್ನು ನೀಡುವ ಕಾರ್ಯ ಉತ್ತಮವಾಗಿದೆ ಎಂದು ನುಡಿದರು . ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನತೆಗೆ ಯಾವುದೇ ರೀತಿಯ ಆರೋಗ್ಯ ತೊಂದರೆ ಇಲ್ಲದಂತೆ , ನಿರಂತರ ಸೇವೆ ಅನನ್ಯವಾಗಿದೆ ಎಂದು ಹೇಳಿ , ಇಲ್ಲಿನ ಕ್ಲಾಕ್ ಟವರ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಯಲ್ಲಿ ಉತ್ತಮ ವಾತಾವರಣದ ಜತೆಗೆ ಸ್ವಚ್ಛತೆ ಮೊದಲ ಆದ್ಯತೆ ನೀಡಿದ್ದು , ಇದು ಇತರೇ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದರು .ಈ ಮೂಲಕ ಸಾರ್ವಜನಿಕರ ಹಿತ ದೃಷ್ಟಿಯಿಂದ ವಾರಿಯಸ್ಗಳ ಸೇವೆ ಸದಾ ಇದೆ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಆಗಲಿ ಎಂದರು .
ದರ್ಗಾ ಮೊಹಲ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ . ನಾರಾಯಣಸ್ವಾಮಿ ಮಾತನಾಡಿ , ಕೋವಿಡ್ ಸಂಕಷ್ಟದಲ್ಲಿ ನಾನಾ ರೀತಿಯ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿರುವ ಸಮಾಜ ಸೇವಕ ಸಿ ಎಂ ಆರ್ ಶ್ರೀನಾಥ್ ಅವರ ಸೇವ ತೊಂದರೆಯಲ್ಲಿ ಇರುವರಿಗೆ ವರದಾನವಾಗಿದೆ ಎಂದರು .
ಜೆಡಿಎಸ್ ಮುಖಂಡ ಬೆಳಮಾರನಹಳ್ಳಿ ಆನಂದ್ ಮಾತನಾಡಿ , ಇಂದಿನ ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಕುಟುಂಬಗಳಲ್ಲಿ ಬೆಲೆ ಇಲ್ಲದೆ ಹೋಗಿದೆ ಸಂಬಂಧಿಕರಲ್ಲಿ ಇಲ್ಲವಾಗಿದೆ ಎಂದರು . ಆದರೆ ಆಶಾ ಕಾರ್ಯಕರ್ತರು ಗರ್ಭಿಣಿಯರ ಆರೈಕೆಯ ಜೊತೆಗೆ ನಿರಂತರ ಸೇವೆಯಲ್ಲಿ ನಿಮ್ಮ ತೊಡಗಿರುವ ನಿಮ್ಮ ಶ್ರಮಕ್ಕೆ ಅಭಿನಂದನ ಎಂದರು . ಈ ಸಂದರ್ಭದಲ್ಲಿ ಟಮಕ ವಿಶ್ವ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.