ರಾಯಲ್ಪಾಡು (ವಿಶ್ವಕನ್ನಡಿಗ ನ್ಯೂಸ್) :- ನಮ್ಮ ಜೀವ ರಕ್ಷಣೆಗೆ ನಾವು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರ ಮಾರ್ಗದರ್ಶನದಂತೆ ಪ್ರತಿಯೊಬ್ಬ ವ್ಯಕ್ತಿಯೂ ಚಿಕಿತ್ಸೆ ಪಡೆಯುವಂತೆ ವೈದ್ಯ ಡಾ | ಕೆ.ಆರ್.ಕವಿತ ಸಲಹೆ ನೀಡಿದರು.
ಅಡ್ಡಗಲ್ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಾರ್ಡ್ ಸಂಸ್ಥೆ ಆರೋಗ್ಯ ಕೇಂದ್ರದ ಆಶಾಕಾರ್ಯಕರ್ತೆಯರಿಗಾಗಿ ನೀಡಲಾದ ಜೀವರಕ್ಷಕ ಔಷಧಿಗಳು ಹಾಗೂ ಇತರೆ ಸುರಕ್ಷ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಕೋವಿಡ್ ಬಂದಾಗಿನಿಂದ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳ ನಿರಂತರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕರೋನಾ ಕಡಿಮೆಯಾಗುತ್ತಿದೆ.
ಕರೋನಾ ಸೋಂಕಿತರ ಮನೆಬಾಗಿಲಿಗೆ ಹೋಗಿ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಧೈರ್ಯವಾಗಿ ಎದುರಿಸುವಂತೆ ಆತ್ಮಸೈರ್ಯ ತುಂಬುವುದರ ಜೊತೆಗೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ , ಆದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಬರಬಹುದಾದ ಕರೋನಾ ಮೂರನೇ ಅಲೆಯನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆಶಾ ಕಾಲರ್ರಕರ್ತರ ಸಹಕಾರ ಮತ್ತು ಸೇವೆ ಹೀಗೆ ಮುಂದುವರಿಯಲಿ ಎಂದು ತಿಳಿಸಿದರು.
ಸಂಯ ಕಾರ್ಯದರ್ಶಿ ಕುಮಾರ್ ನಿರ್ದೇಶಕಿ ಸುಜಾತ ಶ್ರೀನಿವಾಸ್. ಸತೀಶ್. ಸಿಬ್ಬಂದಿಗಳಾದ ಜಿ.ಎಸ್.ನಾಗರಾಜ್. ಕಲ್ಲೇಶ್ ಕುಮಾರ್ ಆರ್.ರತ್ನಮ್ಮ ರಾಧಟನುಸೂಯ , ಪಾರ್ವತಮ್ಮ ಪಿ.ರತ್ನಮ್ಮ . ಮಂಜುಳ ವೇಣು ಸುನಿತ ಶಿವಮ್ಮ ಹಾಗು ಆಶಾ ಕಾರ್ಯಕರ್ತೆಯರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.