(www.vknews.com) : ಸಾಮಾನ್ಯವಾಗಿ ಎಲ್ಲಾ ಮುಸಲ್ಮಾರಿಗೆ ಪೆರ್ನಾಳ್ ಒಂದು ಸಂತೋಷದಾಯಕವಾದ ದಿನವಾಗಿರುತ್ತದೆ. ಹೊಸ ಹೊಸ ಬಟ್ಟೆಗಳನ್ನು ಧರಿಸುವುದು, ಅತ್ತ್ಯುತ್ತಮವಾದ ಊಟೋಪಚಾರಗಳು, ಕುಟುಂಬದವರನ್ನು ಕಂಡು, ಸ್ನೇಹಿತರುಗಳನ್ನು ಭೇಟಿಯಾಗಿ ಅಲಿಂಗನದೊಂದಿಗೆ ಶುಭಾಶಯಗಳನ್ನು ಕೋರಿ, ಸಂಭ್ರಮಿಸುವುದಾಗಿದೆ.
ಅವರದ್ದು ದೊಡ್ಡ ಕುಟುಂಬ ಅದರೆ ಅವರು ಆಚರಿಸಿದ ಪೆರ್ನಾಳ್ ಯಾವುದೇ ಬಡ, ಅನಾಥರಿಗಿಂತ ತೀರವಾಗಿತ್ತು. ಇತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇದ್ದದ್ದರಿಂದ ಒಂದು ಶುಭಾಶಯ ಅವರ ಕುಟುಂಬ, ಸ್ನೇಹಿತರಿಂದ ಬಂದಿತ್ತು ಅದು ಕೂಡ ಅವರು ಕಳುಹಿಸಿದ್ದಕ್ಕೆ ಉತ್ತರವಾಗಿತ್ತು.
ಅವರಿಗೆ ಪರಿಚಯ ಇರದವರು ಬಹಳ ವಿರಹ, ಬಹಳಷ್ಟು ಸ್ನೇಹಿತರನ್ನು ಸಂಪಾದಿಸಿದ್ದರು ಅದರೆ ಅದು ಕೇವಲ ಲೆಕ್ಕಕ್ಕೆ ಸೀಮಿತವಾಗಿತ್ತು. ಸಮುದಾಯದ ಮೇಲೆ ಅಪಾರ ಕಾಳಜಿಯನ್ನೊಂದಿದ್ದರು, ಸಮುದಾಯಕ್ಕೆ, ಸಮಾಜಕ್ಕೆ ತನ್ನಿಂದೇನಾದರೂ ಆಳಿಲು ಸೇವೆಯನ್ನೊದಗಿಸಬೇಕೆಂಬ ಬಹಳವಾಗಿ ಹಂಬಲಿಸುತ್ತಿದ್ದರು ಅದಕ್ಕಾಗಿ ತನು, ಮನಗಳಿಂದ ದುಡಿಯುತ್ತಿದ್ದರು.
ಅವರೊಬ್ಬ ಅನಿವಾಸಿಯಾಗಿದ್ದರು, ತನ್ನ ಕುಟುಂಬ ಪಾಲನೆಗಾಗಿ ತಾಯ್ನಾಡನ್ನು ತೊರೆದು ವಿದೇಶದಲ್ಲಿ ಒಬ್ಬಂಟಿ ಜೀವನ ನಡೆಸುತ್ತಿದ್ದರು. ಅವಾಗ ಅವರು ತನ್ನವರು, ಊರು, ಸಮುದಾಯದವರಿಗೆ ಒಬ್ಬ ನೈತಿಕ ಸ್ಥೈರ್ಯ ಕೊಡುವುದ್ದಲ್ಲದೆ ಒಬ್ಬ ಅಶ್ರಯದಾತರೂ ಅಗಿದ್ದರು ಅದರೆ ಈಗಿನ ಈ ಕೋರೋನಾ, ಲಾಕ್ಡೌನ್ ಅವರ ಪರಿಸ್ಥಿತಿಯನ್ನು ತುಂಬಾ ಬದಲಾಯಿಸಿದ್ದವು.
ಅಲ್ಲಿ ಇದ್ದಂತಹ ಬಹುತೇಕ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು, ಅ ಸಂಘಟನೆಗಳ ಸಭೆಗಳಲ್ಲಿ ಪ್ರಪಂಚದ ಮೂಲೆ, ಮೂಲೆಯಲ್ಲಿರುವ ಬಡವರ, ನಿರ್ಗತಿಕರ, ವಿಧವೆಯರ, ಅನಾಥರ ಬಗ್ಗೆ ಚರ್ಚೆಗಳು ಗಂಟೆಗಟ್ಟಲೆ ನಡೆಯುತ್ತಿದ್ದವು ಅದರೆ ತಮ್ಮ ಬದಿಯಲ್ಲಿ ಕಾಲ ಕಳೆಯುತ್ತಿದ್ದ ಅವರನ್ನು ಅವರಿಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ನಿಜವಾಗಿ ಅವರು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದ್ದರು ಅದರೆ ಅದನ್ನು ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಎಂದಿನಂತೆ ಉತ್ತಮವಾದ ಬಟ್ಟೆಗಳನ್ನು ಧರಿಸುತ್ತಿದ್ದರು, ಮಾತಿನಲ್ಲಿ ಘನತೆ, ಗಾಂಭೀರ್ಯತನವು ಇತ್ತು.
ಪೆರ್ನಾಳ್ ನಮಾಝ್ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿದ್ದಾಗ ಅಕ್ಕ, ಪಕ್ಕ, ನೆರೆ, ಹೊರೆಯ ಮನೆಗಳಲ್ಲಿ ಬರುತ್ತಿದ್ದ ಅಹಾರ ಪಧಾರ್ಥಗಳ ಸುವಾಸನೆಗಳು ಅವರ ಹಸಿವನ್ನು ಇಮ್ಮಡಿಗೊಳಿಸಿದ್ದವು, ನೆರೆಹೊರೆಯವರಿಂದ ಏನಾದರೂ ಬರಬಹುದೆಂಬ ಬಹಳ ತವಕದಲ್ಲಿದ್ದರು ಅದರೆ ಪ್ರವಾದಿ ವಚನವು ಬರೀ ಪುಸ್ತಕ, ಸಾಮಾಜಿಕ ಜಾಲತಾಣಗಳಿಗೆ ಸೀಮಿತಗೊಂಡಿದ್ದವು ಹಾಗು ಇತ್ತ ಕುಟುಂಬ, ಗೆಳೆಯರುಗಳಿಂದ ಕರೆ ಬರಬಹುದೆಂಬ ಬಹಳ ಹುಮ್ಮನ್ನಿಸಿನಲ್ಲಿದ್ದರು ಅದಕ್ಕಾಗಿ ಎರಡೆರಡು ಬಾರಿ ಶುಭಾಶಯಗಳನ್ನು ವಿನಿಮಯಿಸಿದ್ದರು ಕೂಡ ಅದರೆ ಅ ಪ್ರವಾದಿ ವಚನ, ಇಸ್ಲಾಮಿನ ಸಿಧ್ಧಾಂತಗಳು ಕೇವಲ ನಾಲ್ಕು ಗೊಡೆಯೊಳಗೆ ಅದುಮಿಸಲ್ಪಟ್ಟಿದ್ದವು. ಅವರು ಮಾತ್ರ ತನ್ನ ಭೂತಕಾಲವನ್ನು ನೆನೆಯತ್ತಾ, ವರ್ತಮಾನವನ್ನು ಅಣಕಿಸುತ್ತಾ, ಭವಿಷ್ಯತ್ತಿನ ಬಗ್ಗೆ ಚಿಂತಿಸುತ್ತಾ ಅ ಸರ್ವಶಕ್ತನಲ್ಲಿ ತನಗೂ, ತನ್ನ ಕುಟುಂಬ, ತನ್ನ ಗೆಳೆಯರು ಹಾಗೂ ಸಮುದಾಯದ ಒಳಿತಿಗಾಗಿ ಬೇಡುತ್ತಾ ನೆರೆಮನೆಯಿಂದ ಬರುತ್ತಿದ್ದ ಘಮ, ಘಮ ಪರಿಮಳವನ್ನು ಸೇವಿಸುತ್ತಾ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದ ಸಂದೇಶಗಳಿಗೆ ಉತ್ತರಿಸುತ್ತಾ, ಊರಿನಲ್ಲಿದ್ದ ಕೌಟುಂಬಿಕರ ಕರೆಗಳಿಗೆ ನಗುನಗುತ್ತಾ, ಸಂತೋಷದಿಂದಲೇ ಸ್ಪಂದಿಸುತ್ತಾ, ಮನದೊಳಗಿನ ಬೇಗುದಿಯನ್ನು ಮತ್ತು ಹೊಟ್ಟೆಯೊಳಗಿನ ಹಸಿವನ್ನು ತೋರ್ಪಡಿಸದೆ ಕಣ್ಣ ನೀರನ್ನು ನುಂಗುತ್ತಲೆ ಮೆಲ್ಲ, ಮೆಲ್ಲನೆ ನಿದ್ಷೆಯೊಳಕ್ಕೆ ಜಾರಿದ್ದನು.
ಸಮುದಾಯ, ಸಮಾಜ ಈ ಮಟ್ಟಕ್ಕೆ ತಲುಪಲು ಏನು ಕಾರಣವಿರಬಹುದು, ಐಚ್ಛಿಕ ಜ್ಣಾಣದ ಕೊರತೆಯೆ? ಅಹಂಕಾರ, ಅಹಂಭಾವದ ಪರಮಾವಧಿಯೆ? ಪ್ರಪಂಚದ ಕೊನೆಯ ಗಳಿಗೆಗಳ ಮುನ್ಸೂಚನೆಯೆ? ಪ್ರವಾದಿ ವಚನಗಳ ದಿಕ್ಕಾರಿಯಾಗಿರಬಹುದೆ? ಮನುಷ್ಯತ್ವದ ಕೊರತೆಯೆ? ಜೀವನ ತಾನು, ತನ್ನ ಹೆಂಡತಿ, ಮಕ್ಕಳಿಗೆ ಸೀಮಿತವೆಂಬ ಮನೋಭಾವವೆ?
ಅವರು ತಾವು ಇದ್ದ ಸ್ಥಿತಿಗತಿಯನ್ನು ಯಾರಿಗೂ ತೋರ್ಪಡಿಸದೆ ಇಂದಲ್ಲ, ನಾಳೆ ಪರಿಸ್ಥಿತಿ ಸುಧಾರಿಸಬಹುದೆಂಬ ಸರ್ವಶಕ್ತನ ಮೇಲೆ ಅಪಾರ ನಂಬಿಕೆಯನ್ನಿಟ್ಟು ಅದಕ್ಕಾಗಿ ಪರಿಶ್ರಮಿಸುತ್ತಿದ್ದರು ಅದರೂ ಅ ಸರ್ವಶಕ್ತನಿಂದ ಮತ್ತಷ್ಟು ಪರೀಕ್ಷೆಗೆ ಒಳಪಟ್ಟು ಅ ಸರ್ವಶಕ್ತನ ಕ್ರಪೆಗೆ ಪಾತ್ರರಾಗುವರೆಂಬ ಭರವಸೆಯಲ್ಲಿದ್ದರು ಅದರೆ ಅವರ ಕುಟುಂಬ, ಗೆಳೆಯರ ಬಳಗ, ಸಮುದಾಯ, ಸಂಘಟನೆಗಳು, ಸಮಾಜ ಅವುಗಳನ್ನು ಅರಿಯುವಲ್ಲಿ ಮಾತ್ರ ಎಡವಿದ್ದವು.
ಅಶ್ಫಾಕ್ ಎ. ಕಾರ್ನಾಡ್.
(ವಿ.ಸೂ:- ಇದು ಅವರ, ಇವರ ವಿಷಯವಲ್ಲ ನಮ್ಮ ಅಕ್ಕ, ಪಕ್ಕ ನೋಡಿದ್ದಲ್ಲಿ ನಮಗೆ ಕಾಣ ಸಿಗುವುದು)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.