ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ನಗರದಲ್ಲಿ ಬೆಳ್ಳಂಬೆಳಗ್ಗೆ ಪುತ್ತೂರು ನಗರಸಭೆ ನೇತ್ರತ್ವದಲ್ಲಿ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಮಳಿಗೆಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದ ಬಡವರ ಮಳಿಗೆಗಳನ್ನು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಧ್ವಂಸಗೊಳಿಸಿದ ನಗರಸಭೆಯ ಕಾರ್ಯ ವೈಖರಿಯು ಖಂಡನಾರ್ಹ ವಾಗಿದೆ.
ಪ್ರಸಕ್ತವಾಗಿ ಲಾಕ್ ಡೌನ್ ನಿಂದಾಗಿ ಜನಸಾಮಾನ್ಯರು ಕೆಲಸ ವಿಲ್ಲದೆ,ವ್ಯಾಪರಸ್ತರು ವ್ಯಾಪಾರ ವಿಲ್ಲದೆ ಕಂಗಲಾಗಿರುವ ಈ ಸಂಕಷ್ಟದ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟು ಅಲ್ಪಸ್ವಲ್ಪ ಪ್ರಮಾಣದಲ್ಲಿ ಬರುತ್ತಿದ್ದ ಆದಾಯದಿಂದ ಜೀವನ ಸಾಗಿಸುತ್ತಿದ್ದ ಬಡವರ ಮಳಿಗೆಗಳನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳ ಕುಟುಂಬದ ಅನ್ನಕ್ಕೆ ಕಲ್ಲು ಹಾಕಿದ ನಗರಸಭೆಯ ಕೃತ್ಯವೂ ಖೇದಕರವಾಗಿದೆ.
ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ನಮ್ಮ ಆಕ್ಷೇಪಣೆವಿಲ್ಲ,ಆದರೆ ಅದನ್ನು ತೆರವು ಗೊಳಿಸುವಾಗ ಜನರ ಸಮಸ್ಯೆಗಳನ್ನು, ಸಮಯ ಸಂದರ್ಭಗಳನ್ನು ಹಾಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಿತ್ತು.ಅದೇ ರೀತಿಯಲ್ಲಿ ತೆರವುಗೊಳಿಸುವಾಗ ಬಡವರ ಮಳಿಗೆಗಳನ್ನು ಮಾತ್ರವಲ್ಲದೆ ದೊಡ್ಡ ದೊಡ್ಡ ಉದ್ಯಮಿಗಳ ಅಕ್ರಮ ಕಟ್ಟಡಗಳು ಕಣ್ಣಿಗೆ ಕಾಣದೇ ಇರುವ ಹಿಂದಿನ ಉದ್ದೇಶವೇನು ಎಂಬುದನ್ನು ನಗರಸಭೆ ಅಧಿಕಾರಿಗಳು ಸ್ಪಷ್ಟಡಿಸಬೇಕು. ಹಾಗೂ ಮಳಿಗೆಗಳ ತೆರವಿನಿಂದ ಕಂಗಾಲಾಗಿರುವ ಸಣ್ಣಪುಟ್ಟ ಬೀದಿ ಬದಿ ವ್ಯಾಪಾರಿಗಳಿಗೆ ಕೂಡಲೇ ನಗರಸಭೆಯ ವತಿಯಿಂದಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿ ಅಧ್ಯಕ್ಷ ಕೆ.ಎಚ್ ಯಹ್ಯಾ ಕೂರ್ನಡ್ಕ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.