ಕೋಲಾರ (ವಿಶ್ವಕನ್ನಡಿಗ ನ್ಯೂಸ್) :-ಮಾನವ ಆರೋಗ್ಯಯುತವಾಗಿ ಜೀವನ ನಡೆಸಲು ಪ್ರಕೃತಿಯಲ್ಲಿನ ನೀರು , ಗಾಳಿ , ಗಿಡ ಮರ ಮುಖ್ಯ ಹೀಗಾಗಿ ಆರೋಗ್ಯಕರ ಪರಿಸರವು ಮತ್ತು ಆರೋಗ್ಯಯುತ ಮಾನವ ಸಮಾಜಕ್ಕೆ ಅಡಿಪಾಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್ .ಎ .ಬಾಬು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ನೇತಾಜಿ ಇಕೋ ಕ್ಲಬ್ ಏರ್ಪಡಿಸಿದ್ದ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆದರೆ ಇತ್ತೀಚೆಗೆ ಈ ಪರಿಸ್ಥಿತಿ ಬದಲಾಗಿತ್ತು ತೀವ್ರವಾಗಿ ಜನಸಂಖ್ಯೆ ಹೆಚ್ಚಾಗುತ್ತಿರುವ ಜತೆಗೆ ಪರಿಸರದ ಮೇಲಿನ ಕಾಳಜಿ ದೂರವಾಗುತ್ತಿದೆ ಎಂದರು.
ಪ್ಲಾಸ್ಟಿಕ್ ಬಳಕೆ ಮರಗಳ ನಾಶ ನೀರಿನ ಮಿತ ಬಳಕೆ ಇಲ್ಲದೆ ಭೂಮಿ ಬರಡಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಹೀಗಾಗಿ ಈ ಸಮಾಜವನ್ನು ಸುಧಾರಿಸಲು ಮತ್ತು ಜನರನ್ನು ಈ ಕುರಿತು ಜಾಗೃತರನ್ನಾಗಿ ಮಾಡುವ ಅಗತ್ಯವಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ಮಾತನಾಡಿ ಭೂಮಿಯ ನೈಸರ್ಗಿಕ ಪರಿಸರದಿಂದ ದೂರವಾಗುತ್ತಿರುವ ಅಥವಾ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳು ಮತ್ತು ಮರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದ್ದು ಈ ಉದ್ದೇಶದಿಂದ ವಿಶ್ವ ಪರಿಸರ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.
ಪಂಚಾಯಿತಿ ಉಪಾಧ್ಯಕ್ಷರಾದ ಎನ್.ವಿ. ನರೇಂದ್ರಬಾಬು ಮಾತನಾಡಿ ಪ್ರಕೃತಿಯ ಸಂರಕ್ಷಣೆ ಬಹಳ ಅವಶ್ಯಕ ವಿಜ್ಞಾನಿಗಳು ಸಹ ಮುಂದಿನ ದಿನಗಳಲ್ಲಿ ಪ್ರಕೃತಿಯ ಅಳಿವಿನ ಬಗ್ಗೆ ನಮಗೆ ಎಚ್ಚರಿಕೆ ನೀಡಿದ್ದಾರೆ ಜಾಗತಿಕ ತಾಪಮಾನ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸಂರಕ್ಷಣೆ ಕೇವಲ ನೈತಿಕತೆಯ ಪ್ರಶ್ನೆ ಅಲ್ಲ ಅದು ನಮ್ಮದೇ ಉಳಿವಿನ ಪ್ರಶ್ನೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಜಿ . ಶ್ರೀನಿವಾಸ್ ಮಾತನಾಡಿ ಜನಸಂಖ್ಯೆ ಪರಿಸರ ಮಾಲಿನ್ಯ ನಗರೀಕರಣ , ಕೈಗಾರೀಕರಣ , ಅರಣ್ಯ ನಾಶದಿಂದ ತಾಪಮಾನ ಏರುತ್ತಿದೆ . ಮಳೆ ಇಳಿಮುಖವಾಗುತ್ತಿದೆ ಪರಿಸರ ಮಾಲಿನ್ಯ , ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ . ಇಂಥ ಸಮಸ್ಯೆಗಳನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು . ಇಕೋ ಕ್ಲಬ್ನ ಹೆಚ್.ಮುನಿಯಪ್ಪ , ಕೆ , ಮಮತಾ , ಕೆ . ಆರ್.ಸೊಣೇಗೌಡ , ಪಿ ಎಂ ಗೋವಿಂದಪ್ಪ ಎಂ.ಆರ್ .ಮೀನಾ.ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.