ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಕನ್ನಡ ನಾಡುನುಡಿಯ ಉಳಿವಿಗಾಗಿ ಅನೇಕರು ಶ್ರಮಿಸಿದ್ದಾರೆ , ಅವರೇ ನಮ್ಮ ಜೀವನದ ಆದರ್ಶವಾಗಬೇಕು , ಮಕ್ಕಳು ಮನೆಯಲ್ಲೂ ಕನ್ನಡವನ್ನೇ ಮಾತನಾಡಬೇಕು ಎಂದು ಮುಳಬಾಗಿಲು ತಾಲ್ಲೂಕು ಕುರುಡುಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಎಂ.ಪಾರ್ವತಮ್ಮ ಕರೆ ನೀಡಿದರು.
ಕುರುಡುಮಲೆ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ , ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳು ಕನ್ನಡವನ್ನು ಸ್ಪಷ್ಟವಾಗಿ ಓದುವ ಬರೆಯುವಮಾತನಾಡುವುದನ್ನು ಚೆನ್ನಾಗಿ ಕಲಿತರೆ ಅದೇ ನಾಡು , ನುಡಿಗ ನೀಡುವಂತಹ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಭುವನೇಶ್ವರಿ ಮರವಣಿಗೆ ನಡೆಯಿತು . ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ರವಿ , ಸದಸ್ಯರಾದ ವಿನಾಯಕ , ಗಣೇಶ್ , ಆಸೀಪ್ , ಆನ್ಸರ್ , ಎಸ್ಡಿಎಂಸಿ ಅಧ್ಯಕ್ಷ ವಿ.ಮಂಜುನಾಥ್ ಹಾಗೂ ಸದಸ್ಯರು , ಸಿಆರ್ಪಿ ಸುಬ್ರಮಣಿ , ಮುಖಂಡರಾದ ಪೈರೋಜ್ ಅಹ್ಮದ್ಪಾಷ , ಅಮೃದ್ , ಲಕ್ಷ್ಮಿ , ಶಿಕ್ಷಕರಾದ ಎನ್.ಇ.ಕಳಾವತಿ , ಪಿ.ವಿ.ಪ್ರಹ್ಲಾದ , ಎಸ್.ಮಂಜುನಾಥ್ , ವಿ.ಅಮರಾವತಿ , ಹೆಚ್.ಬಿ.ಹಸೀನಾ , ಕೆ.ಕಲನ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.