ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ) : ಸಾರ್ವಜನಿಕರು ತಾಲ್ಲೂಕು ಕಚೇರಿ ಮತ್ತು ಗ್ರಾಮದ ನಾಡ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿ ಸಲು ಅಧಿಕಾರಿಗಳು ಜನಸ್ನೇಹಿ ಯಾಗಿ ಕಾರ್ಯನಿರ್ವಹಿಸ ಬೇಕು ಎ೦ದು ಜಿಲ್ಲಾಧಿ ಕಾರಿ ವೆಂಕಟರಾಜ್ ಅವರು ತಿಳಿಸಿದರು .
ಶ್ರೀನಿವಾಸಪುರ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ತಾಲ್ಲೂಕು ಕಚೇರಿಗೆ ಬಂದ ಅರ್ಜಿಗಳನ್ನು ಸ್ವೀಕರಿಸಬೇಕು . ಈ ಅರ್ಜಿಯ ಪೂರ್ಣ ಜವಾಬ್ದಾರಿ ನನ್ನದು ಎಂದು ಅಧಿಕಾರಿಗಳು ಕಾರ್ಯನಿರ್ವಹಿಸ ಬೇಕು . ಅಧಿಕಾರಿಗಳು ಕಚೇರಿಗಳಿಗೆ ಸರಿ ಯಾದ ಸಮಯಕ್ಕೆ ಹಾಜರಾಗ ಬೇಕು . ಕಚೇರಿಗೆ ಬಂದ ಅರ್ಜಿಗಳನ್ನು ಸ್ವೀಕರಿಸಿ ಅರ್ಜಿಯನ್ನು ಸ್ಕ್ಯಾನ್ ಮಾಡಿಕೊಳ್ಳಬೇಕು . ಸಾಧ್ಯವಾದರೆ ಈ ಅರ್ಜಿಯನ್ನು ಪರಿಹರಿಸಬೇಕು .
ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಗೆ ಹೋಗಿ ಎಂದು ಅರ್ಜಿದಾರರಿಗೆ ಪೂರ್ಣ ಮಾಹಿತಿಯನ್ನು ನೀಡಿ ಸಂಬಂಧಿತ ಇಲಾಖೆಯವರು ಪರಿಚಯವಿದ್ದರೆ ಅರ್ಜಿದಾರರು ಬರುತ್ತಿದ್ದಾನೆ ಎಂದು ಮಾಹಿತಿ ನೀಡಬೇಕು .
ಏಳು ದಿನಗಳ ನಂತರ ಅರ್ಜಿಯ ಕಾರ್ಯ ಸ್ಥಿತಿಯನ್ನು ಅಧಿಕಾರಿಗಳು ವಿಚಾರಿಸಿಕೊಳ್ಳ ಬೇಕು . ಈ ಕ್ರಿಯೆಯಿಂದ ಸಮಸ್ಯೆ ಗಳು ಸರಳವಾಗಿ ಬಗೆಹರಿಯುತ್ತವೆ . ಅಧಿಕಾರಿಗಳು ನಿಷ್ಠಾವಂತರಾಗಿ ಬಡ ಜನರ ಪರವಾಗಿ ಕಾರ್ಯ ನಿರ್ವಹಿಸಬೇಕು . ಕಡತಗಳನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು .
ಅಧಿಕಾರಿಗಳು ಜನಸೇವೆಯನ್ನು ಉನ್ನತ ಸೇವೆ ಎಂದು ತಿಳಿದು ಕಾರ್ಯನಿರ್ವಹಿಸಬೇಕು . ಪ್ರತಿ ಎಂದು ಅರ್ಜಿಯನ್ನು ಕಡ್ಡಾಯವಾಗಿ ಟಪಾಲ್ನಲ್ಲಿ ಸ್ಕ್ಯಾನ್ ಮಾಡಿಕೊಳ್ಳಬೇಕು .
ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದಿರುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು . ಸರ್ಕಾರವು ಸ್ವಾವಲಂಬನೆ ಎಂಬ ಆ್ಯಪ್ ಅನ್ನು ಜಾರಿಗೆ ತಂದಿದೆ . ಈ ಆ್ಯಪ್ನ ಪೂರ್ಣ ಮಾಹಿತಿ ಯನ್ನು ರೈತರಿಗೆ ಅಧಿಕಾರಿಗಳು ತಿಳಿಸಬೇಕು .
ಅಧಿಕಾರಿಗಳು ದಿನಚರಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು . ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಗಳನ್ನು ಸ್ವೀಕರಿಸಿದರು .
ಸಭೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರರಾದ ಶರೀನ್ ತಾಜ್ , ಪೊಲೀಸ್ ಅಧಿಕಾರಿಗಳಾದ ನಾರಾಯಣ ಸ್ವಾಮಿ , ಶ್ರೀನಿವಾಸಪುರ ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಸೇರಿದ೦ತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.