(www.vknews.in) : ನೂಪುರ್ ಶರ್ಮಾಳ ಪ್ರವಾದಿ ನಿಂದನೆ ವಿರುದ್ಧ ಪ್ರಜಾ ಸತ್ತಾತ್ಮಕ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ, ಸಂಘ ಪರಿವಾರ ದ ಗೂಂಡಾಗಳನ್ನು ಮದ್ಯೆ ತೂರಿಸಿ, ವಿಧ್ವಂಸ ಕೃತ್ಯ ನಡೆಸಿ, ಆ ಕೃತ್ಯವನ್ನು ಮುಸ್ಲಿಮರ ಮೇಲೆ ಆರೋಪಿಸಿ, ಪ್ರತಿಭಟನಾ ಕಾರರ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಿದ ಯೋಗಿ ಬಿ.ಜೆ.ಪಿ ಸರಕಾರಕ್ಕೆ ಸುಪ್ರೀಮ್ ಕೋರ್ಟಿನ ಸಲಹೆ ಸರ್ಪಕವಾಗಿಯೆ ದೊರೆತಿದ್ದು, ಬಿ. ಜೆ. ಪಿ ಭಾರತೀಯ ಸೇನೆಗೆ ನಿಯಮಾನುಸಾರ ಪ್ರವೇಶಾತಿ ನಡೆಸಬೇಕಿದ್ದ ಜವಾನ್ ಸೇರ್ಪಡೆಯನ್ನು ರದ್ದು ಗೊಳಿಸಿ, ತನ್ನ ಆರ್. ಎಸ್. ಎಸ್ ದೇಶದ್ರೋಹಿ ಪಡೆಗಳನ್ನು ಸೇನೆಗೆ ಸೇರ್ಪಡೆ ಗೊಳಿಸಲು ಅಗ್ನಿ ಪಥವನ್ನು ಯೋಜನೆಯನ್ನು ಕಾರ್ಯ ಗತ ಗೊಳಿಸಲು ಹೊರಟಿದೆ. ಬಿಹಾರದಲ್ಲಿ ಈ ಅಗ್ನಿ ಪಥ ನೇಮಕಾತಿಯನ್ನು ವಿರೋಧಿಸಿ ದೊಂಭಿಯೆ ನಡೆದಿದೆ. ಇದಕ್ಕೆ ಒಂದು ಜೀವ ಬಲಿಯಾಗ ಬೇಕಾಯಿತು.
ಸಿ.ಟಿ.ರವಿ ಇತ್ತೀಚೆಗೆ ಬುಲ್ಡೋಜರ್ ಹೇಳಿಕೆ ನೀಡಿದ್ದಾರೆ. ಸಿಟಿ ರವಿ ತಿಳಿಯಲಿ ಬಿ.ಜೆ.ಪಿ ಯ ಬುಲ್ಡೋಜರ್ ಗಳು ಬಿಹಾರದಿಂದ ಹೊರಟ ಅಗ್ನಿ ಪಾತದಲ್ಲಿ ಕೊಚ್ಚಿ ಹೋಗಲಿದೆ. ದೇಶದ ಜನರ ವಿವೇಚನೆ ಗಿಂತ ಮಿಗಿಲಾದ ಬುಲ್ಡೋಜರ್ ಬೇರೊಂದಿಲ್ಲ. ಸಿ.ಟಿ.ರವಿ ಇನ್ನಾದರೂ ತನ್ನ ನಾಲಗೆಯೆಂಬ ಬುಲ್ಡೋಜರ್ ಅನ್ನು ಮಡಚಿ ಬಾಯಲ್ಲಿ ಇಟ್ಟು ಕೊಳ್ಳಲಿ, ಆಯ ತಪ್ಪಿದರೆ ಬುಲ್ಡೋಜರ್ ನಾಲಗೆ, ಜನರ ರೋಷಕ್ಕೆ ಬಲಿಯಾಗಬಹುದು.
ಕೆ.ಅಶ್ರಫ್ ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.