(www.vknews.in) : ಮಾನವನ ಸರ್ವತೋಮುಖ ಬೆಳವಣಿಗೆಗೆ ಜಗತ್ತಿನ ಸಾರ್ವಭೌಮತ್ವದ ಮುನ್ನಡೆಗೆ ಪ್ರಕ್ರತಿಯ ನೈಸರ್ಗಿಕ ಸಂಪತ್ತಿಗೆ, ಸಮುದ್ರದ ಆಳವಾದ ಅಗೋಚರ ಶಕ್ತಿಗೆ, ಮಾನವನ ವಿಸ್ಮಯ ಜಗತ್ತಿಗೆ ಪರಿಚಯಿಸಿದ ಕುರ್ಆನ್ ಜ್ಞಾನದ ಆಗರ ಎಂದು ಸಯ್ಯದ್ ಮದನಿ ದರ್ಗಾ ಕಮಿಟಿ ಅದ್ಯಕ್ಷರಾದ ಅಬ್ದುಲ್ ರಶೀದ್ ಹಾಜಿ ಹೇಳಿದರು.
ಅವರು ಇಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ನಾಲ್ಕನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಹಿಫ್ಲುಲ್ ಕುರ್ಆನ್ ಕಂಠಪಾಠ ಸ್ಪರ್ಧೆ ತೊಕ್ಕೊಟ್ಟು ಕಲ್ಲಾಪುವಿನ ಪಿ. ಸಿ. ಗ್ರೂಪ್ ಔಟ್ ಡೋರ್ ಸಭಾಭವನದಲ್ಲಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯು ಟಿ ಖಾದರ್, ಪಿ.ಸಿ.ಗ್ರೂಪ್ ಮೆನೇಜಿಂಗ್ ಡೈರೆಕ್ಟರ್ ಪಿ.ಸಿ ಹಾಸಿರ್, ಸಾಗರ್ ಕಲೆಕ್ಷನ್ ಇದರ ಮಾಲಕರಾದ ಇಸ್ಮಾಯಿಲ್ ಸಾಗರ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ( ರಿ) ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್, ಸಮಾಜ ಸೇವಕರಾದ ಶಾಕಿರ್ ಅಹ್ಮದ್ ಕೆರೆಬಳಿ,ದಾರ್ಮಿಕ ಗುರುವರ್ಯರಾದ ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು, ಕುರ್ಆನ್ ವಾಚನ ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಮಹಮ್ಮದ್ ಆಕಿಬ್ ಪಾಂಡೇಶ್ವರ,ದ್ವೀತಿಯ ಸ್ಥಾನ ಮಹಮ್ಮದ್ ಅನಸ್ ಪಡೀಲ್,ತ್ರತೀಯ ಸ್ಥಾನ ಹಿಲಾಲ್ ಅಬ್ದುಲ್ ಜಲೀಲ್ ಉಪ್ಪಳ, ಇವರು ಆಯ್ಕೆ ಯಾದರು.ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ, ಕೋಶಾಧಿಕಾರಿ ಸತ್ತಾರ್ ಪುತ್ತೂರು.ತಸ್ಲೀಮ್ ಹರೇಕಳ, ಶಿಬಿರದ ಉಸ್ತುವಾರಿ ಇಂತಿಯಾಝ್ ಬಜಪೆ, ವ್ಯವಸ್ಥಾಪಕರಾದ ನವಾಝ್ ಉಳ್ಳಾಲ,ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ ಸಿ ರೋಡ್, ಖಾದರ್ ಮುಂಚೂರು,ಸಿರಾಜ್ ಉಳಾಯಿ ಬೆಟ್ಟು,ರಾಫಿಝ್ ಕ್ರಷ್ಣಾಪುರ, ನಝೀಬ್ ಪಡುಬಿದ್ರೆ,ನಿಹಾನ್ ಉಳ್ಳಾಲ, ದಿಲ್ ಶಾನ್ ಉಳ್ಳಾಲ,(ನೌಫಲ್ ಇಪ್ತಿಕಾರ್)ನಶೀಲ್ ಉಪಸ್ಥಿತರಿದ್ದರು.
ಕುರ್ಆನ್ ವಾಚನ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಸುಮಾರು ಮೂವತ್ತೈದು ವಿದ್ಯಾರ್ಥಿಗಳು ಭಾಗವಹಿಸಿದ್ದರು . ಹಾಫಿಳ್ ಸುಲ್ತಾನ್ ನಬೀಲ್ ಕಿರಾಅತ್ ಪಠಿಸಿದರು,ಝಾಕಿರ್ ಇಕ್ಲಾಸ್ ಸ್ವಾಗತಿಸಿದರು.ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಂಚಾಲಕರಾದ ಸಂಶುದ್ದೀನ್ ಬಲ್ಕುಂಜೆ ಪ್ರಸ್ತಾಪಮಾಡಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.