ಭಾರತದ ತಿರಂಗ ಧ್ವಜ ಹಾರುತಿರಲು ನನ್ನೆದೆಯಲಿ ಉಕ್ಕುತಿದೆ ಧನ್ಯತೆ ಒಂದೇ ತಾಯ ಮಕ್ಕಳಂತೆ ಸೌಹಾರ್ದತೆಯಲ್ಲಿರಿ, ಬದುಕಿಗಿದೆ ಮಾನ್ಯತೆ
ಒಂಟಿ ಹೆಣ್ಣು ನಡೆವ ಇರುಳ ನಿರ್ಭಯ ಬೀದಿ ಸಾರಬೇಕು “ಸ್ವತಂತ್ರ್ಯ ದೇಶ ಭಾರತ” ಹೊಲದಿ ದುಡಿವ ರೈತನ ಕೊರಳ ಕುಣಿಕೆ ಬಿಚ್ಚಿದರೆ, ನೀಡುವೆವು ನಮ್ಮ ಸಹ ಮತ
ತಿನ್ನೋ ಪ್ರತಿ ಅನ್ನಕ್ಕೂ ಹೆಚ್ಚಿಸಿದರೆ ತೆರಿಗೆ, ಬದುಕಿಲ್ಲಿಗೇ ಸಮಾಧಿ ಉಣ್ಣದೆ ಬದುಕಲೆಂದು, ಓ ಸರಕಾರವೇ.. ನೀಡುವಿರೇನು ಹೊಟ್ಟೆಗೆ ಔಷಧಿ?
ಪದವಿ ಬಿರುದು ಪಡೆದು ಯೋಗ್ಯ ಕೆಲಸ ಲಭಿಸಿದರೇ, ಯುವ ಬದುಕೇ ಸಾರ್ಥಕ ಕೋಮು ದ್ವೇಷ ಬಿತ್ತುವವರ ಮಟ್ಟ ಹಾಕೊ ಗುಂಡಿಗೆಯ ದೇಶ ಪ್ರೇಮ ನಿಸ್ವಾರ್ಥಕ
ಧರ್ಮವ ಅಪಾರ್ಥಗೊಳಿಸುವ ಸಂಘಟನೆಗಳಿವು, ಜೀವ ಬಲಿ ಪಡೆಯಲು ಧರ್ಮ ಹೇಳಿಲ್ಲ ರಾಜಕೀಯ ದಾಹಿಗಳ ಕಪಟಕ್ಕೆ ಗುರಿಯಾಗದಿರು ಅಮಾಯಕ, ಸಂಘಟನೆಗಳು ಧರ್ಮವಲ್ಲ
ವೈವಿಧ್ಯಮಯ ದೇಶವಿದು ಭರತಖಂಡ, ಕಾಮಿನಬಿಲ್ಲಿಗಿದೆ ಹೋಲಿಕೆ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿ, ಧ್ಯೇಯವೊಂದಿರಲಿ ನೈರ್ಮಲ್ಯಕ್ಕೆ
ದೇಶಕ್ಕಾಗಿ ಬಲಿಯಾದ ಹುತಾತ್ಮರು ನೀಡಿದ ಕೊಡುಗೆಯಿದು ವರದಾನ ಮೆರೆಯಿರಿ ಎದೆ ತಟ್ಟಿ, ದೇಶದ ಭದ್ರತೆಯ ಬುನಾದಿಯಿದು ಸಂವಿಧಾನ
~ ಸಾರಾಅಲಿ ಪರ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.