ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್): ತಾಲ್ಲೂಕು ಎಲ್ಐಸಿ ಏಜೆಂಟರು ಶುಕ್ರವಾರ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಎಲ್ಐಸಿ ಪ್ರತಿನಿಧಿ ಡಿ.ಆರ್. ಮಧೇಶ್ ಮಾತನಾಡಿ , ಭಾರತೀಯ ಜೀವವಿಮಾ ನಿಗಮ್ ಆನ್ ಲೈನ್ ಮೂಲಕ ಪಾಲಿಸಿ ಮರಾಟ ಮಾಡುವುದು ಮತ್ತು ರಿಯಾಯಿತಿ ನೀಡುವದನ್ನು ನಿಲ್ಲಿಸಬೇಕು. ನೇರ ಮಾರುಕಟ್ಟೆಯಿಂದ , ನೇರವಾಗಿ ಪಾಲಿಸಿದಾರರನ್ನು ಸಂಪರ್ಕಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು . ಗ್ರಾಚ್ಯುಟಿ ರೂ .10 ಲಕ್ಷದವರೆಗೆ ಹೆಚ್ಚಿಸಬೇಕು.
ಎಲ್ಲ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರಿಗೆ ಗ್ರೂಪ್ ಇನ್ಸೂರೆನ್ಸ್ ಹೆಚ್ಚಿಸಬೇಕು. ಪ್ರತಿನಿಧಿಗಳಿಗೆ ಶ್ರೇಣಿ ಪ್ರಕಾರ ಶಿಕ್ಷೆ ಪ್ರಮಾಣ ಪರಿಚಯಿಸಬೇಕು .
ಬೋನಸ್ ಹೆಚ್ಚಿಸಬೇಕು.
ವ್ಯವಹಾರ ವಿನಾಯಿತಿ ಮುಂದುವರಿಸ ಮಿತಿ ಶೇ .74 ಹೆಚ್ಚಳ ಕೈಬಿಡಬೇಕು ಎಂದು ಒತ್ತಾಯಿಸಿದರು . ಕೇಂದ್ರ ಸರ್ಕಾರ ಷೇರು ಮಾರುಕಟ್ಟೆಯಲ್ಲಿ ಎಲ್ ಐಸಿ ಪಿಒ ಬಿಡುಗಡೆ ಮಾಡುತ್ತಿರುವುದನ್ನು ಎಎಲ್ ಐಸಿ ಪ್ರತಿನಿಧಿಗಳ ಸಂಘ ವಿರೋಧಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಎಲ್ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ಸಿ.ಪ್ರಸಾದ್ ಅವರಿಗೆ ನೀಡಲಾಯಿತು.
ಎಲ್ಐಸಿ ಪ್ರತಿನಿಧಿಗಳಾದ ಪ್ರಕಾಶ್ ರೆಡ್ಡಿ , ಪೆದ್ದನ್ನ , ಮಂಜುನಾಥ್ , ಎಸ್.ನಾರಾಯಣಸ್ವಾಮಿ , ಕೆ.ನಾರಾಯಣಸ್ವಾಮಿ , ಚೌಡಪ್ಪ , ಎಸ್.ಲಕ್ಷ್ಮಣಬಾಬು , ಸಬೀರ್ , ಶ್ರೀನಾಥ್ , ಎನ್.ವಿ.ವೆಂಕಟರಾಮರೆಡ್ಡಿ , ಕೃಷ್ಣಪ್ಪ , ಸುಮಂತು ಶ್ರೀನಿವಾಸರೆಡ್ಡಿ , ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.