ನಾಪೋಕ್ಲು (www.vknews.in) : ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1497ನೇ ಜನ್ಮದಿನಾಚರಣೆಯನ್ನು ನಾಪೋಕ್ಲುವಿನಲ್ಲಿ ಮುಸಲ್ಮಾನ ಬಾಂಧವರು ಸಂಭ್ರಮದಿಂದ ಆಚರಿಸಿದರು.
ನಾಪೋಕ್ಲು ಪಟ್ಟಣದ ಮೊಹಿಯುದ್ದೀನ್ ಜುಮಾ ಮಸೀದಿ, ಹಿದಾಯತುಲ್ ಇಸ್ಲಾಂ ಮದರಸ, ಹಳೇ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮಕ್ಕೆ ನಾಪೋಕ್ಲು ಜುಮಾ ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಅವರು ಚಾಲನೆ ನೀಡಿದರು.
ಭಾನುವಾರ ಬೆಳಗ್ಗೆ ಫಜರ್ ನಮಾಜಿನ ಬಳಿಕ ಪಟ್ಟಣದ ಮಸೀದಿಯಲ್ಲಿ ಪ್ರವಾದಿಯವರ ಹೆಸರಿನಲ್ಲಿ ಮೌಲೂದ್ ಪಾರಾಯಣ, ನಾಡಿನ ಸುಭೀಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ನಾಪೋಕ್ಲು ಪಟ್ಟಣದ ಮುಖ್ಯ ಬೀದಿಗಳಲ್ಲಿ ವಿಶ್ವ ಪ್ರವಾದಿಯವರ ಸೌಹಾರ್ಧತೆಯ ಸಂದೇಶದ ಘೋಷಣೆಗಳನ್ನು ಸಾರುತ್ತಾ ನಡೆದ ಜಾಥಾದಲ್ಲಿ ವಿದ್ಯಾರ್ಥಿಗಳ, ಯುವಕರ, ಹಾಗೂ ಹಿರಿಯರ ದಫ್ ಪ್ರದರ್ಶನ ನೋಡುಗರಿಗೆ ಮೆರಗು ನೀಡಿತು.
ಪಟ್ಟಣದ ಮಾರುಕಟ್ಟೆ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಸಲಿಂ ಹಾರಿಸ್, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರಾದ ಎಂ.ಎಚ್. ಅಬ್ದುಲ್ ರಹ್ಮಾನ್ ಪ್ರವಾದಿಯವರ ಜನ್ಮದಿನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ, ಪ್ರಭಾಷಣ,ಕವಾಲಿ,ಬುರ್ದಾ,ಸೇರಿದಂತೆ ಪ್ರವಾದಿ ಸಂದೇಶ ಸಾರುವ ಹಲವಾರು ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಪ್ರಮಾಣ ಪತ್ರ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಸೀದಿಯ ಮಾಜಿ ಅಧ್ಯಕ್ಷ ಇಬ್ರಾಹಿಂ ಹಾಜಿ,ಕಾರ್ಯದರ್ಶಿ ಅಹಮದ್ ಸಿ.ಎಚ್, ಟಿ.ಎ. ಅನೀಫ್,ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ,ನಾಡಿನ ಪ್ರಮುಖರಾದ ಹಮೀದ್ ಹಾಜಿ, ಶೌಕತ್ಅಲಿ ಹಾಜಿ , ಪಿ.ಯು.ಉಸ್ಮಾನ್ ಹಾಜಿ,ಕೆ. ಎಚ್. ಮಹಮ್ಮದ್,ಇಬ್ರಾಹಿಂ ಮುಸ್ಲಿಯಾರ್,ಬಾಷಾ ಸಾಹೇಬ್, ಇಬ್ರಾಹಿಂ,ಮೆಹಬೂಬ್ ಸಾಬ್,ವಕೀಲರಾದ ರಿಯಾಜ್,ಅಬ್ದುಲ್ ಅಝೀಝ್,ಎಂ.ಎ. ಮನ್ಸೂರ್ ಆಲಿ, ಮಹಮ್ಮದ್ ಹಾಜಿ ,ಗ್ರಾ.ಪಂ.ಸದಸ್ಯರಾದ ಮಹಮ್ಮದ್ ಖುರೇಶಿ, ಕೆ.ಎ. ಇಸ್ಮಾಯಿಲ್, ಓ.ಎಸ್. ಎಫ್,ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮದರಸ ಅಧ್ಯಾಪಕರು,ಜಮಾಅತ್ ಸದಸ್ಯರು ಸೇರಿದಂತೆ ಮತ್ತಿತರ ಪ್ರಮುಖರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಕಾರ್ಯಕ್ರಮವನ್ನು ಅಹಮದ್ ಸ್ವಾಗತಿಸಿ, ಟಿ.ಎ. ಹನೀಫ್ ವಂದಿಸಿದರು.
ವರದಿ :ಝಕರಿಯ ನಾಪೋಕ್ಲು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.