(www.vknews.in) : ಪುತ್ತೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಮದ್ಯೆ ಬಡಜನರಿಗೆ ಆಶಾದಾಯಕ ವಾಗಿರುವಂತಹ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸಮಯದಲ್ಲೂ ರೋಗಿಗಳ ದಂಡು ಕಾಣಲು ಸಿಗುತ್ತಿರುವುದು ಅಲ್ಲಿಯ ಡಾಕ್ಟರ್ ಗಳ ಕಾರ್ಯ ಕ್ಷಮತೆಯ ಕಾರಣ ಆಗಿದೆ. ಆದರೆ ಅಲ್ಲಿ ರೋಗಿಯನ್ನು ನೋಡಿ ಅವರಿಗೆ ಚಿಕಿತ್ಸೆ ನೀಡಲು ತುರ್ತು ಬೇಕಾಗಿರುವ ಸ್ಕಾನಿಂಗ್ ನಲ್ಲಿ ಬೆಳಿಗ್ಗೆ 11.30 ಗೆ ಹೋದರೆ ಮರುದಿನ ಬೆಳಿಗ್ಗೆ ಬನ್ನಿ ಎನ್ನುವ ಉತ್ತರ ಸಿಗುತ್ತದೆ, ಎಂದಾದರೆ ಡಾಕ್ಟರ್ ಗಳು ಕ್ಷಮತೆಯಿಂದ ಕಾರ್ಯ ನಿರ್ವಹಿಸಿದರು ಕೂಡ ಅಲ್ಲಿ ಅದಕ್ಕೆ ಪೂರಕವಾಗಿ ವ್ಯವಸ್ಥೆಗಳು ಸರಿ ಇಲ್ಲದೆ ಇದ್ದರೆ ತುರ್ತು ಅಗತ್ಯದ ರೋಗಿಗಳು ಖಾಸಗಿ ಲಾಬ್ ಗಳನ್ನು ಅವಲಂಬಿಸಿ ಕೊಳ್ಳಬೇಕು ಎನ್ನುವ ಸ್ಥಿತಿ ಬದಲಾವಣೆ ಯಾವಾಗ ಆಗಬಹುದು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲವೇ ❓
ಇಂದು ಒಂದು ಮಗು ಹೊಟ್ಟೆ ನೋವು ಎಂದು ಮಕ್ಕಳ ಡಾಕ್ಟರ್ ಅನ್ನು ತೋರಿಸಿದಾಗ ,ಅದಕ್ಕೆ ಚಿಕಿತ್ಸೆ ಕೊಡಲು ಸ್ಕಾನ್ ಮಾಡಿ ಬನ್ನಿ ಎಂದು 11 ಗಂಟೆಗೆ ಕೊಟ್ಟ ಚೀಟಿ ಯನ್ನು ನೋಡಿ, ಸ್ಕಾನಿಂಗ್ ಕೊಠಡಿಯಲ್ಲಿ ಇರುವಂತಹವರು ನಾಳೆ ಬೆಳಿಗ್ಗೆ 9.30 ಗೆ ಬನ್ನಿ ಎಂದು ಹೇಳಿದರೆ, ಆ ಮಗುವಿಗೆ ತುರ್ತು ಚಿಕಿತ್ಸೆಯ ಅಗತ್ಯ ಇದ್ದು, ಈ ಕಾರಣದಿಂದ ಮಗುವಿಗೆ ಏನಾದರೂ ಆದರೆ ಇದಕ್ಕೆ ಉತ್ತರಿಸುವವರು ಯಾರು ?
ಇಂತಹ ಪರಿಸ್ಥಿತಿ ಯಿಂದಾಗಿ ರೋಗಿಗಳಿಗೆ ಏನಾದರೂ ಸಂಭವಿಸಿದರೆ ಇದರ ಹೊಣೆಯನ್ನು ಹೊರಬೇಕಾದವರು ಯಾರು ? ಅಥವಾ ಇದು ಕೂಡ ಖಾಸಗಿ ಲಾಬಿಗಳು ಶಾಮೀಲಾಗಿರುವ ಸಾದ್ಯತೆ ಇದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿ ಬರುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.