(ವಿಶ್ವ ಕನ್ನಡಿಗ ನ್ಯೂಸ್) : ಪ್ರತಿಷ್ಠಿತ ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಉಳಿಯ ಹೊಯ್ಗೆ 5 ನೇ ವಾರ್ಡನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಹಿಳಾ ಕೌನ್ಸಿಲರ್ ಶ್ರೀಮತಿ ವೀಣಾ ಶಾಂತಿ ಡಿಸೋಜ ರವರು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ
ಬಿಜೆಪಿಯ 6 ಸದಸ್ಯರ ತಟಸ್ಥ ನಿಲುವು, ಮತ್ತು SDPI 6 ಹಾಗೂ ಜೆಡಿಎಸ್ 4 + ಓರ್ವ ಪಕ್ಷೇತರ ಸದಸ್ಯ ಹೀಗೆ ಒಟ್ಟು 11 ಸದಸ್ಯರ ವಿರೋಧದ ನಡುವೆ ಆಡಳಿತ ಕಾಂಗ್ರೆಸ್ ಪಕ್ಷ ತಮ್ಮ ಓರ್ವ ಸದಸ್ಯ ರವಿಚಂದ್ರರವರ ಗೈರು ನೊಂದಿಗೆ ಪಕ್ಷದ 12 ಹಾಗೂ ಓರ್ವ ಪಕ್ಷೇತರ ಸದಸ್ಯ ಅಬ್ದುಲ್ ಆಝೀಝ್ ರವರ ಬೆಂಬಲ ಹೀಗೆ ಒಟ್ಟು 13 ಸದಸ್ಯರ ಬಲದೊಂದಿಗೆ ತಮ್ಮಲ್ಲಿಯೇ 9 ಸ್ಥಾಯಿ ಸಮಿತಿ ಸದಸ್ಯರನ್ನು ಆರಿಸಿ ಕೊಳ್ಳುವ ಮೂಲಕ ವೀಣಾ ಡಿಸೋಜ ರನ್ನು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಾರೆ
ವೀಣಾರವರ ಆಯ್ಕೆಯೊಂದಿಗೆ ಉಳ್ಳಾಲ ನಗರ ಸಭೆಯಲ್ಲಿ ಅಧ್ಯಕ್ಷೆ: ಚಿತ್ರಕಲಾ ( ಹಿಂದೂ), ಉಪಾಧ್ಯಕ್ಷ: ಆಯ್ಯೂಬ್ (ಮುಸ್ಲಿಂ), ಸ್ಥಾಯಿ ಸಮಿತಿ ಅಧ್ಯಕ್ಷೆ: ವೀಣಾ ಶಾಂತಿ ಡಿಸೋಜ (ಕ್ರಿಶ್ಚಿಯನ್) ಹೀಗೆ ಮೂರು ಸಮುದಾಯಕ್ಕೂ ಪ್ರಾಶಸ್ತ್ಯ ಸಿಗುವಂತೆ ಕಾಂಗ್ರೆಸ್ ನೋಡಿ ಕೊಂಡಿದೆ
ನಗರ ಸಭೆಯಲ್ಲಿ ಪಕ್ಷಗಳ ಬಲಾಬಲ.. ಕಾಂಗ್ರೆಸ್ . : 13 ಬಿಜೆಪಿ : 06 SDPI. : 06 ಜೆಡಿಎಸ್ : 04
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.