(ವಿಶ್ವ ಕನ್ನಡಿಗ ನ್ಯೂಸ್) : ಹೊಸ ವರ್ಷದಲ್ಲಿ ಅಪರಾಧಗಳನ್ನು ತಡೆಯಲು ಪೊಲೀಸರು ಪ್ರಾಣಿಬಲಿ ಮಾಡಿದರು. ತಮಿಳುನಾಡಿನ ದಿಂಡಿಗಲ್ ನ ವಡಮಧುರ ಪೊಲೀಸ್ ಠಾಣೆಯ ಪೊಲೀಸರು ಬಲಿಪೂಜೆ ನೆರವೇರಿಸಿದ್ದಾರೆ. ವೇದಸಂದೂರು ಉಪಾಧೀಕ್ಷಕಿ ದುರ್ಗಾದೇವಿ, ವಡಮಧುರ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿ ಮುರುಗನ್ ನೇತೃತ್ವದಲ್ಲಿ ಪ್ರಾಣಿ ಬಲಿ ನಡೆಯಿತು. ಮೇಕೆ ಬಲಿ ನೀಡಿ ಪೊಂಗಲ್ ಅರ್ಪಿಸಿ ಪೊಲೀಸ್ ತಂಡ ವಾಪಸಾದರು.
ಹೊಸ ವರ್ಷದಲ್ಲಿ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧವನ್ನು ಕಡಿಮೆ ಮಾಡಲು ಪ್ರಾಣಿ ಬಲಿ ದೇವರಿಗೆ ಅರ್ಪಿಸುವ ಭಾಗವಾಗಿತ್ತು. ವೇದಸಂದೂರು ತಾಲೂಕಿನ ಅಯ್ಯಲೂರಿನ ವಂದಿ ಕರುಪ್ಪನಸಾಮಿ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಡೆಯಿತು. ದೇವಸ್ಥಾನದಲ್ಲಿ ನಡೆದ ಬಲಿ ನೀಡಿದ ಮೇಕೆಗಳನ್ನು ಹುರಿದು ಬಡಿಸಲಾಯಿತು.
ತಮಿಳುನಾಡಿನ ವಿವಿಧ ದೇವಾಲಯಗಳಲ್ಲಿ ಪೂಜೆಯ ಅಂಗವಾಗಿ ಪ್ರಾಣಿ ಬಲಿಗಳನ್ನು ನಡೆಸಲಾಗುತ್ತದೆ. ಆದರೆ 1960ರಲ್ಲಿ ಕೇಂದ್ರ ಸರ್ಕಾರ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ದೇಶದ ದೇವಸ್ಥಾನಗಳಲ್ಲಿ ಪ್ರಾಣಿಬಲಿ ನಿಷೇಧಿಸಿತ್ತು. ಈ ಆದೇಶದ ಹೊರತಾಗಿಯೂ ತಮಿಳುನಾಡಿನಲ್ಲಿ ಕಾನೂನು ಪರಿಪಾಲಕರೇ ಪ್ರಾಣಿಬಲಿ ನಡೆಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.