ಹೊಲಮಾಳ(ವಿಶ್ವಕನ್ನಡಿಗ ನ್ಯೂಸ್): ಕೊಡಗು ಜಿಲ್ಲೆಯ ಹೊಲಮಾಳ ಸುನ್ನಿ ಜುಮಾ ಮಸ್ಜಿದ್ ಅಧೀನದ ತಅಲೀಮುದ್ದೀನ್ ಸುನ್ನಿ ಮದರಸಾ ವಿದ್ಯಾರ್ಥಿ ಸಂಘಟನೆ ಎಸ್.ಬಿ.ಎಸ್ ವತಿಯಿಂದ ಭವ್ಯ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸುನ್ನಿ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಮುಸ್ತಫಾ ರವರ ಅಧ್ಯಕ್ಷತೆಯಲ್ಲಿ ಆಡಳಿತ ಸಮಿತಿ ಗೌರವಧ್ಯಕ್ಷ ಹಮೀದ್ ಹಾಜಿ ಧ್ವಜಾರೋಹಣಗೈದರು.
ಸುನ್ನಿ ಜುಮಾ ಮಸ್ಜಿದ್ ಖತೀಬರಾದ ಬಶೀರ್ ಸಖಾಫಿ ಸಂದೇಶಭಾಷಣಗೈದರು. ಮದರಸಾ ವಿದ್ಯಾರ್ಥಿಗಳಾದ ಶಮ್ಮಾಸ್ ಹಾಗೂ ಮಿರ್ಶಾದ್ ರಾಷ್ಟ್ರಗೀತೆ ಆಲಾಪಿಸಿದರು. ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕ್ವಿಝ್ ಸ್ಪರ್ಧೆಯ ವಿಜಯಿಗಳಿಗೆ ಬಹುಮಾನ ವಿತರಿಸಲಾಯಿತು.
ಆಡಳಿತ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾದರು. ಸದರ್ ಮುಅಲ್ಲಿಂ ಸ್ವಬಾಹ್ ಸಖಾಫಿ ಅಲ್ ಹಿಮಮಿ ಸ್ವಾಗತಿಸಿ ಆಡಳಿತ ಸಮಿತಿ ಪ್ರ. ಕಾರ್ಯದರ್ಶಿ ಜಂಶೀರ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.