ಹನೂರು (www. vknews.in) : ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 2,38,43,177 ರೂ ಸಂಗ್ರಹವಾಗಿದೆ.
ಬೆಟ್ಟದ ಬಸ್ ನಿಲ್ದಾಣದ ಬಳಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಶ್ರೀ ಸಾಲೂರು ಬೃಹನ್ಮ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಯ ನೇತೃತ್ವದಲ್ಲಿ ಹುಂಡಿ ತೆರೆದಿದ್ದು ಸಿ ಸಿ ಟಿ ವಿ ಕಣ್ಗಾ ವಾಲಿನಲ್ಲಿ ಹಾಗೂ ಪೋಲಿಸ್ ಬಂದೋಬಸ್ತ್ ನಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಏಣಿಕೆ ಕಾರ್ಯ ನಡೆದಿದ್ದು 36 ದಿನಗಳಲ್ಲಿ ಬರೊಬ್ಬರಿ 2,38,43,177 ರೂ ಹಾಗೂ ಚಿನ್ನ 63 ಗ್ರಾಂ , ಬೆಳ್ಳಿ 3 ಕೆ ಜಿ 173 ಗ್ರಾಂ ಸಂಗ್ರಹವಾಗಿದೆ. ಅಮಾವಾಸ್ಯ, ರಜಾ ದಿನಗಳು, ಶ್ರವಣಾ ಮಾಸದ ತಿಂಗಳುಗಳಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡಿ, ಹರಕೆ ಹೊತ್ತ ಭಕ್ತರು ಹರಕೆ ತೀರಿಸಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯಧರ್ಶಿ ಸರಸ್ವತಿ, ಬ್ಯಾಂಕ್ ಮ್ಯಾನೇಜರ್, ಬ್ಯಾಂಕ್ ಸಿಬ್ಬಂದಿ ಗಳು, ಪೊಲೀಸ್ ಸಿಬ್ಬಂದಿಗಳು, ಪ್ರಧಿಕಾರದ ಸಿಬ್ಬಂದಿಗಳು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.