(www.vknews.in) : ನಂತರ 1914ರಲ್ಲಿ ಆರಂಭವಾದ ಪ್ರಥಮ ಜಾಗತಿಕ ಮಹಾಯುದ್ಧವು ಝಯನಿಸ್ಟರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂದರ್ಭವನ್ನೊದಗಿಸಿತು . ಪ್ರಬಲರಾದ ಹೊಸ ವಶಾಹತುಶಾಹಿ ಶಕ್ತಿಗಳಾದ ಬ್ರಿಟನ್, ಫ್ರಾನ್ಸ್ ,ರಷ್ಯ ಮೊದಲಾದ ಶಕ್ತಿಗಳು ಒಂದು ಕಡೆ ಜೊತೆಗೂಡಿದರೆ ದುರ್ಬಲರಾಗಿದ್ದ ಉಸ್ಮಾನಿಯ ಖಿಲಾಫತ್ ಜರ್ಮನಿಯ ಸಹಕಾರದೊಂದಿಗೆ ಎದುರು ಬಣದಲ್ಲಿದ್ದರು.
ಆದರೂ ಮುಸ್ಲಿಮರ ಒಗ್ಗಟ್ಟಿನಿಂದ ಬ್ರಿಟನ್ ವಿರುದ್ಧ ಗಾಲಪೋಲಿನಲ್ಲಿ ನಡೆದ ಮೊದಲ ಯುದ್ಧದಲ್ಲಿ ತುರ್ಕಿಗಳು ಜಯಶಾಲಿಗಳಾದರು. ಮುಸ್ಲಿಂ ಒಗ್ಗಟ್ಟಿನ ಶಕ್ತಿ ತಿಳಿದ ಬ್ರಿಟನ್ ಆ ಒಗ್ಗಟ್ಟು ಮುರಿಯಲು ಉಪಾಯ ಹೂಡಿದರು. ಈ ಉದ್ದೇಶಕ್ಕಾಗಿ ಈ ಮೊದಲೇ ಲಾರೆನ್ಸ್ ಎಂಬ ಗೂಡಾಚಾರನನ್ನು(Lawrence of Arabia) ಮುಸ್ಲಿಂ ಸಾತ್ವಿಕನ ರೂಪದಲ್ಲಿ ಅರಬ್ ಮುಸ್ಲಿಂ ದೇಶಗಳಿಗೆ ಕಳುಹಿಸಿದ್ದ. ಅಲ್ಲಿ ಆ ಗೂಡಚಾರ ಮುಸ್ಲಿಂ ಒಗ್ಗಟ್ಟಿನ ಮತ್ತು ಖಿಲಾಫತ್ ನ ವಿರುದ್ಧ ಕುಟಿಲ ತಂತ್ರಗಳನ್ನು ಹೆಣೆದ. ಪಾನ್ ಇಸ್ಲಾಮಿಸಂ”(Pan Islamisum) ಸರ್ವ ಮುಸ್ಲಿಂ” ಎಂಬ ಆಶಯದ ಬದಲು ಪ್ಯಾನ್ ಅರಬಿಸಂ”(Pan Arabisum) ಸರ್ವ ಅರಬಿಗಳು” ಎಂಬ ಆಶಯವನ್ನು ಹರಡಿದ. ತುರ್ಕಿಯಲ್ಲಿ ಕಮಾಲ್ ಅತಾ ತುರ್ಕ್ (Musthafa Kamal Pasha)ನನ್ನು ಮುಂದು ಮಾಡಿ ತುರ್ಕಿ ರಾಷ್ಟ್ರವಾದವನ್ನು ಬೆಳೆಸಿದ.
ಮೆಕ್ಕಾದ ರಾಜ್ಯಪಾಲರಾಗಿದ್ದ ಹುಸೈನ್ ಶರೀಫ್ ನನ್ನು ವಿವಿಧ ರೀತಿಯ ಪ್ರಲೋಭನೆಯ ಮೂಲಕ ಅಧಿಕಾರದ ಆಸೆ ತೋರಿಸಿ ಬ್ರಿಟಿಷರು ತಮ್ಮ ಕಡೆಗೆ ಸೆಳೆದುಕೊಂಡರು. ಬರೆ ಮಕ್ಕಾದ ರಾಜ್ಯಪಾಲರು ಮಾತ್ರವಾಗಿದ್ದ ಹುಸೈನ್ ಶರೀಫ್ ನನ್ನು ತಮಗೆ ನೆರವು ನೀಡಿದರೆ ಇಡೀ ಅರೇಬಿಯಾ ಮತ್ತು ಶ್ಯಾಮ್ ನ (ಇಂದಿನ ಸೌದಿ ಅರೇಬಿಯಾ,ಇರಾಕ್ ,ಯು.ಎ.ಇ, ಸಿರಿಯ, ಜೋರ್ಡಾನ್ ಲೆಬನಾನ್ ಫಲಸ್ತೀನ್ ಮೊದಲಾದ ಪ್ರದೇಶಗಳು) ರಾಜನನ್ನಾಗಿ ಮಾಡುವ ಭರವಸೆಯನ್ನು ನೀಡಿದರು ಬ್ರಿಟಿಷರು ಅದೇ ವೇಳೆಯಲ್ಲಿ ಬ್ರಿಟಿಷರು ತಮ್ಮ ಜೊತೆಯಲ್ಲಿದ್ದ ಫ್ರ್ಯಾನ್ಸ್ ನವರಿಗೆ ಸಿರಿಯಾ ವನ್ನು ,ರಷ್ಯನರಿಗೆ ತುರ್ಕಿಯನ್ನು ಝಯನಿಸ್ಟರಿಗೆ ಪ್ಯಾಲೆಸ್ತೀನನ್ನು ನೀಡುವುದಾಗಿ ಈ ಮೊದಲೇ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿದ್ದರು.
1917 ನವಂಬರ್ 2ರಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆಲ್ಥರ್ ಬಾಲ್ಫರ್ (Alther Balfer) ಅಮೇರಿಕಾದ ಝಯನಿಸ್ಟ್ ಮಂದಾಳು ವಾಲ್ಟಯರ್ ರೋಥಶೈಲ್ಡ್(Walter Rothschild)ನಿಗೆ ಪತ್ರ ಬರೆದು ಪ್ಯಾಲೇಸ್ತೀನಿನ ಪ್ರದೇಶವನ್ನು ಝಯನಿಸ್ಟರಿಗೆ ನೀಡುವುದಾಗಿ ಹೇಳಿತು .ಈ ಹೇಳಿಕೆಯು ಇತಿಹಾಸದಲ್ಲಿ ಬಾಲ್ಫರ್ ಘೋಷಣೆ(Balfer declaration )ಎಂದು ಹೆಸರಾಗಿದೆ.
ವಿಪರ್ಯಾಸವೆಂದರ ಈ ಸಂದರ್ಭದಲ್ಲೆಲ್ಲ ಪ್ಯಾಲೆಸ್ತೀನ್ ಪ್ರದೇಶವು ಸಂಪೂರ್ಣವಾಗಿ ತುರ್ಕಿಗಳ (ಉಸ್ಮಾನಿಯಾ ಖಿಲಾಫತ್) ಅಧೀನದಲ್ಲಿ ಇತ್ತೆಂಬುದು. ಪೊಳ್ಳು ಆಶ್ವಾಸನೆಗೆ ಮರುಳಾದ ಹುಸೈನ್ ಶರೀಫ್ ತಮ್ಮದೇ ಖಲೀಫರ ವಿರುದ್ಧ ಬ್ರಿಟಿಷರ ಪರವಹಿಸಿದ. ಕೊನೆಗೂ 1917 ಡಿಸೆಂಬರ್ 9ರಂದು ಪ್ಯಾಲೇಸ್ತೀನ್ ಮತ್ತು ಇತರ ಪ್ರದೇಶಗಳು ಬ್ರಿಟನ್ ಮತ್ತು ಅವರ ಬೆಂಬಲಿಗರ ವಶವಾಗುತ್ತದೆ. ಬ್ರಿಟೀಷ್ ಸೇನಾಧಿಕಾರಿ ಲಾರ್ಡ್ ಅಲನ್ಬೀ (Lord Alanbee)ಆ ಸಂದರ್ಭದಲ್ಲಿ ಹೀಗೆಂದನು “ನಿಜವಾಗಿಯೂ ಶಿಲುಬೆ ಯುದ್ಧವು ಮುಗಿದದ್ದು ಇಂದಿನ ದಿನವಾಗಿದೆ”
— ಸಲಾಹುದ್ದೀನ್ ಅಯ್ಯೂಬಿ, ಕಡಬ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.