ಶಿಡ್ಲಘಟ್ಟ(ವಿಶ್ವ ಕನ್ನಡಿಗ ನ್ಯೂಸ್): ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಗೆ ಎನ್ ಆರ್ ಎಲ್.ಎಂ ಕೇಂದ್ರದ ತಂಡದ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.
ಲಿಂಗತ್ವ ಆಧಾರಿತ ದೌರ್ಜನ್ಯ ವಿರುಧ್ಧ ನವೆಂಬರ್ ೨೫ ರಿಂದ ಡಿಸೆಂಬರ್ ೨೫ ವರೆಗೆ ರಾಷ್ಟಿçÃಯ ಅಭಿಯಾನ ನಡೆಯುತ್ತಿದ್ದು ಇದನ್ನು ಪರಿಶೀಲಿಸುವ ಸಲುವಾಗಿ ಕೇಂದ್ರದ ಐದು ಜನರನ್ನು ಒಳಗೊಂಡ ತಂಡವು ಭೇಟಿ ನೀಡಿ ಎನ್.ಆರ್.ಎಲ್.ಎಂ ಸದಸ್ಯರ ಕಾರ್ಯವೈಖರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಸಂಸ್ಥೆಯ ಶಾಲಿನಿ ರಾಘವಯ್ಯ,ಅಮಿತಾ ರಕ್ಷಿತ್ ಹಾಗೂ ಎನ್ ಆರ್ ಎಲ್ ಎಂ ರಾಷ್ಟಿçÃಯ ಸಂಪನ್ಮೂಲ ವ್ಯಕ್ತಿ ಆಶಾ, ರಾಜ್ಯ ಕಾರ್ಯಕ್ರಮ ನಿರ್ದೇಶಕಿ ಮಂಜುಳಾ,ಲೂಸಿ ಎಸ್.ಪಿ.ಎಂ ಸಂಜೀವಿನಿ ಎನ್.ಆರ್.ಎಲ್.ಎಂ ಬೆಂಗಳೂರು ಇವರು ಒಳಗೊಂಡAತೆ ತಂಡ ಜಿಲ್ಲೆಗೆ ಆಗಮಿಸಿ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ಆರಂಭಿಸಿರುವ ಅಭಿಯಾನವನ್ನು ಯಶಸ್ವಿಗೊಳಿಸಲು ಎನ್.ಆರ್.ಎಲ್.ಎಂ ತಂಡದ ಸದಸ್ಯರು ನಡೆಸುತ್ತಿರುವ ಕಾರ್ಯವಿಧಾನವನ್ನು ವೀಕ್ಷಿಸಿದರು.
ಎನ್.ಆರ್.ಎಲ್.ಎಂ ಯೋಜನೆಯ ಮೂಲಕ ಇಡೀ ದೇಶಾದ್ಯಂತ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟಿçÃಯ ಅಭಿಯಾನ ನಡೆಯುತ್ತಿದೆ ಕರ್ನಾಟಕವೂ ಸಹಿತ ಐದು ರಾಜ್ಯಗಳಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂಬುದನ್ನು ಅಧ್ಯಯನ ನಡೆಸಿ ದಾಖಲಾತಿ ಮಾಡಲು ಕೇಂದ್ರದಿAದ ಐದು ಜನ ಸದಸ್ಯರು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎನ್.ಆರ್.ಎಲ್.ಎಂ ಮೂಲಕ ಕೈಗೊಂಡಿರುವ ಚಟುವಟಿಕೆಗಳನ್ನು ವೀಕ್ಷಿಸಿದ ತಂಡದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ತಂಡದ ಸದಸ್ಯರಿಗೆ ಅದ್ದೂರಿ ಸ್ವಾಗತ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎನ್ ಆರ್ ಎಲ್. ಎಂ ಮೂಲಕ ಕೈಗೊಂಡಿರುವ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಲು ಆಗಮಿಸಿದ ಕೇಂದ್ರದ ತಂಡದ ಸದಸ್ಯರಿಗೆ ಮಳಮಾಚನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು, ಗ್ರಾಮದಲ್ಲಿ ರಂಗೋಲಿ ಹಾಕುವ ಮೂಲಕ ಮತ್ತು ಮಹಿಳೆಯರು ಅತಿಥಿ ಗಣ್ಯರನ್ನು ಹೋಗುಚ್ಚ ನೀಡಿ ಪೂರ್ಣಕುಂಭದಿAದ ಗ್ರಾಮೀಣ ಸ್ಟೈಲ್ನಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯಮ್ಮ ಪಾಪಣ್ಣ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಈಶ್ವರಪ್ಪ, ಎನ್.ಆರ್.ಎಲ್.ಎಂ ಡಿಪಿಎಂ ಎ.ಎಸ್. ಬಿರಾದರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ. ಮುನಿರಾಜ, ಸಿ ಡಿ ಪಿ ಓ ನೌತಾಜ್, ಗ್ರಾಮ ಪಂಚಾಯತಿಯ ಹಿರಿಯ ಸದಸ್ಯ ಬೈರೇಗೌಡ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈಲ, ಕಾರ್ಯದರ್ಶಿ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.