ಉಳ್ಳಾಲ (www.vknews.in) : ಪರಸ್ಪರ ಅರಿತುಕೊಂಡು ಕಷ್ಟ,ಸುಖಗಳಲ್ಲಿ, ಜಾತಿ-ಮತ-ಧರ್ಮವೆಂಬ ಭೇದವನ್ನು ಶಾಂತಿ, ಪ್ರೀತಿ,ಸೌಹಾರ್ಧತೆಯನ್ನು ಎತ್ತಿ ಹಿಡಿದು ಅನ್ಯೋನ್ಯತೆಯಿಂದ ಜೀವಿಸುವ ಮನೋಭಾವವನ್ನು ಬೆಳೆಸಿಕೊಂಡು, ಉದಾತ್ತ ಮಾನವ ಮೌಲ್ಯವನ್ನು ಎತ್ತಿ ಹಿಡಿಯಬೇಕೆಂದು ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷ ಹಾಗೂ ನಮ್ಮ ಕ್ಷೇತ್ರದ ಶಾಶಕರೂ ಆಗಿರುವ ಸನ್ಮಾನ್ಯ ಯು.ಟಿ.ಖಾದರ್ ಹೇಳಿದರು.
ಅವರು ಪಡಿಕ್ಕಲ್ ಪರಿಸರದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಧಾರ್ಮಿಕ ಮತ್ತು ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಬದ್ರುಲ್ ಹುದಾ ಅಶೋಷಿಯೇಷನ್ ಏರ್ಪಡಿಸಿದ ಇಫ್ತಾರ್ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಲ್ಲಿನ ಯುವಕರು ಸೌಹಾರ್ದ ವಾತಾವರಣಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಪ್ರಶಂಸಿಸಿದರು. ಇಲ್ಲಿನ ಬೇಡಿಕೆಗಳಾದ ರಸ್ತೆ ಮತ್ತು ನೀರಿನ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು.
ಸಂಸ್ಥೆಯ ಆಫೀಸ್ ನ ಕೆಲಸಕ್ಕಾಗಿ ಅನುದಾನ ಮಂಜೂರು ಮಾಡಲು ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ಣಾಟಕ ವಿಧಾನ ಸಭೆ ಅಧ್ಯಕ್ಷರಾದ ಯು.ಟಿ.ಖಾದರ್ ಮತ್ತು ಪಡಿಕ್ಕಲ್ ಜಮಾಆತ್ ಅಧ್ಯಕ್ಷರಾಗಿ, ಜಮಾಅತನ್ನು ಪ್ರಾಮಾಣಿಕವಾಗಿ ಮುನ್ನಡೆಸಿ, ಇದೀಗ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಪಿ.ಎಚ್. ಇಬ್ರಾಹಿಂ ಬಾವ ಹಾಜಿ, ಹಾಗೂ ರಾಜ್ಯ ಸರ್ಕಾರದ ಯಕ್ಷಗಾನ ಕಲಾ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಗುರುರಾಜ್ ಭಟ್ ಕೈರoಗಳ ಅವರನ್ನು ಸನ್ಮಾನಿಸಲಾಯಿತು. ಜಮಾಅತ್ ಅಧ್ಯಕ್ಷ ನಾಸಿರ್ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿದರು.
ಹವ್ಯಾಸಿ ಬರಹಗಾರ ಡಿ.ಎ.ಅಬ್ಬಾಸ್ ಪಡಿಕ್ಕಲ್ ಸ್ವಾಗತಿಸಿದರು. ಜಮಾಅತ್ ಧರ್ಮಗುರು ಅಬ್ದುನ್ನಾಸಿರ್ ಮದನಿ ಜಮಾಅತ್ ಉಪಾಧ್ಯಕ್ಷ ಬಾವ ಹಾಜಿ, ಪ್ರಧಾನ ಕಾರ್ಯದರ್ಶಿ ಖಲಂದರ್, ಕೋಶಾಧಿಕಾರಿ ಪಿ.ಎಸ್.ಮುಹಮ್ಮದ್, ಸಜೀಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಸಿರ್ ಸಜೀಪ, ಕೈರoಗಳ,ಬಾಳೆಪುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಶೀರ್ ಸಾಜಿಗಾರ್, ಸದಸ್ಯರಾದ ರಹ್ಮಾನ್, ಯಾಕೂಬ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೈದರ್ ಕೈರoಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಬ್ದುಲ್ ಜಲೀಲ್, ಸೇವಾದಳದ ಶಮೀರ್ ಪಜೀರ್, ಜಸೀಮ್. ಬದ್ರುಲ್ ಹುದಾ ಸಂಘಟನೆಯ ಗೌರವಾಧ್ಯಕ್ಷ ಲತೀಫ್ ಬರೆ, ಅಧ್ಯಕ್ಷ ಡಿ.ಎಚ್. ನಾಸಿರ್, ಉಪಾಧ್ಯಕ್ಷ ಮುನೀರ್ ಪಡಿಕ್ಕಲ್, ಪ್ರಧಾನ ಕಾರ್ಯದರ್ಶಿ ತಕ್ಯುದ್ದೀನ್, ಕೋಶಾಧಿಕಾರಿ ಅಶ್ರಫ್. ಹಿರಿಯ ಮುಖಂಡರುಗಳಾದ, ಡಿ.ಎಚ್, ಇಬ್ರಾಹಿಂ, ಡಿ.ಎಚ್. ಅಬ್ಬು ಹಾಜಿ, ಶೇಕುಂಚ, ಅಬ್ಬಾಸ್ ಬರೆ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.