ಕೋಝಿಕ್ಕೋಡ್ (www.vknews.in) ; ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕಾದವರಿಗೆ ಜುಮುಅ ನಮಾಜಿಗೆ ಅನುಕೂಲವಾಗುವಂತೆ ಮಹಲ್ಲಾ ಸಮಿತಿಗಳ ಸಹಕಾರದೊಂದಿಗೆ ಜುಮುಆ ಸಮಯವನ್ನು ನಿಗದಿಪಡಿಸುವಂತೆ ಸಮಸ್ತ ಕೇರಳ ಜಮೀಯ್ಯತುಲ್ ಉಲೇಮಾ ಮಹಲ್ಲಾ ಸಮಿತಿಗಳಿಗೆ ಸೂಚನೆ ನೀಡಿದೆ.
ಒಂದು ಮಸೀದಿಯಲ್ಲಿ ಅಜಾನ್ ಕೊಟ್ಟು ನಮಾಜ್ ನಿರ್ವಹಿಸಿದರೆ, ಇನ್ನೊಂದು ಮಸೀದಿಯಲ್ಲಿ ಒಂದು ಗಂಟೆಯ ನಂತರ ಜುಮುಆ ನಮಾಝ್ ವ್ಯವಸ್ಥೆ ಮಾಡಿದರೆ ಕರ್ತವ್ಯಕ್ಕೆ ನಿಯೋಜಿತರಾದವರು ಜುಮುಆ ನಮಾಝ್ ಮಾಡಲು ಅನುಕೂಲವಾಗುತ್ತದೆ ಎಂದು ಅಧ್ಯಕ್ಷ ಸೈಯದ್ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಗಳ್ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಆಲಿಕುಟ್ಟಿ ಮುಸ್ಲಿಯಾರ್, ಫತ್ವಾ ಸಮಿತಿ ಅಧ್ಯಕ್ಷ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಕೋಶಾಧಿಕಾರಿ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯೊಟ್ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.