ಹಳೆಯಂಗಡಿ (www.vknews.com) : ಕೊರೋಣ ಸೊಂಕಿನಿಂದ ಅನಾರೋಗ್ಯ ಕೀಡಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ’ ಹಾಗು ಅವರ ಧರ್ಮ ಪತ್ನಿ ಕವಿತಾ ಡಿಸೋಜಾ ಅವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಕದಿಕೆ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಕೆ. ಸಾಹುಲ್ ಹಮೀದ್ ರವರ ನೇತ್ರತ್ವದಲ್ಲಿ ಗ್ರಾಮಸ್ಥರು ಹಾಗೂ ಜಮಾತಿನ ಸದಸ್ಯರು ಸೇರಿ ಹಳೆಯಂಗಡಿ, ಕದಿಕೆಯ ಹಝ್ರತ್ ಸಯ್ಯದ್ ಮೌಲಾನ ವಲಿಯುಲ್ಲಾ (ಖ.ಸ) ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಐವನ್ ಡಿಸೋಜಾ’ ರವರ ರಾಜಕೀಯ ಗುರುಗಳೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೂ ಕೂಡಾ ಅತೀ ಶೀಘ್ರ ಆರೋಗ್ಯವಂತರಾಗಿ ಎಂದಿನಂತೆಯೇ ಜನಸಾಮಾನ್ಯರ ಸೇವೆಯಲ್ಲಿ ತೊಡಗಲಿ, ಡಿಸೋಜ” ರವರು ಕದಿಕೆ ಪರಿಸರಕ್ಕೆ ನೀಡಿದ ಸೇವೆಯನ್ನು ಸ್ಮರಿಸಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದ ಜಮಾತಿನ ಹಿರಿಯರಾದ ಹಾಜಿ ಸಾಹುಲ್ ಹಮೀದ್ ಸಂತಕಟ್ಟೆ, ಜಮಾತ್ ಉಪಾಧ್ಯಕ್ಷ ರಾದ ಹಾಜಿ ಪಿ.ಸಿ ಮೊಹಿದೀನ್ ಹಾಗು ಅಬ್ದುಲ್ ರಹಮಾನ್ ಹಾಜಿ ಕದಿಕೆ ಇವರ ಕೂಡ ಆರೋಗ್ಯ ವಂತರಾಗಲಿ ಎಂದು ಧರ್ಮ ಗುರುಗಳಾದ ಜನಾಬ್ ಅಬ್ದುಲ್ ರಹಿಮಾನ್ ಫೈಝಿ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಸಾಗು, ಇಲ್ಲಿನ ಖತೀಬರಾದ ಇ.ಎಮ್ ಅಬ್ದುಲ್ಲಾ ಮದನಿ ಸಾಗ್, ರವರು ಯಾಸೀನ್ ಪಠಿಸಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಜಮಾಅತಿನ ಪದಾದಿಕಾರಿಗಳಾದ ಸರ್ಪರಾಝ್, ಅಬ್ದುಲ್ ರಝಾಕ್ ಮೂಡುತೋಟ, ಮನ್ಸೂರ್ ಕೆ.ಎಂ., ಹಾಜಿ ಅಬ್ದುಲ್ ರಹಿಮಾನ್, ಸಿದ್ದಿಕ್ ಮೀತಲ ಮನೆ, ಅಬ್ದುಲ್ ರಹಿಮಾನ್, ಎನ್,ಹೆಚ್ ಮುಸ್ತಫಾ ಸಾಗ್, ಅಶ್ರಫ್ ಪಡುತೋಟ, ಯೂಸುಫ್ ಇಂದಿರಾನಗರ, ಜಮಾಲುದ್ದೀನ್, ಪಕ್ರುದ್ದೀನ್ ಹಾಗೂ ಮದರಸ ಗುರುಗಳಾದ S.H ಅಬ್ದುಲ್ ರಝಾಕ್ ಪಳ್ಳಿಗುಡ್ಡೆ, ರಹಿಮಾನ್ ಮದನಿ ಸಾಗು, ಅಬುಬಕ್ಕರ್ ಫೈಝಿ, ಮುಹಮ್ಮದ್ ಆಲಿ ಉಸ್ತಾದ್, ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ M.A, ಸದಸ್ಯರು ಗಳಾದ ಹಮೀದ್ ಸಾಗ್, ಬಶೀರ್ ಸಾಗ್, ಅಬ್ದುಲ್ ಅಜೀಜ್ I.A.K, ಮತ್ತು ಊರಿನ ಸದಸ್ಯರಾದ ಕಾದರ್ ಕೋಡಿಕಲ್,ಕೆ. ಮುಹಮ್ಮದ್ ಕಾರ್ನಾಡ್, ಅಬ್ದುಲ್ ಕಾದರ್ ಸಾಗ್, ಇಬ್ರಾಹಿಂ ಇಂದಿರಾ ನಗರ, ಸರ್ಪರಾಝ್ ಸಂತಕಟ್ಟೆ, ಅಬ್ದುಲ್ಲ ಕದಿಕೆ, ಹಮೀದ್ ಪಲ್ಲಿಗುಡ್ಡೆ, ಅಬ್ದುಲ್ ರಹಿಮಾನ್ ಪಳ್ಳಿಗುಡ್ಡೆ, ಸಾದಿಕ್, ಕಬೀರ್ ಸಾಗ್, ಶೇಕಬ್ಬ, ರಫೀಕ್, ಕಾಸಿಂ ಕದಿಕೆ, ನಿಹಾಲ್ ಕದಿಕೆ, ಆಶಿರ್, ನಿಹಾಲ್ ಕೆ ಹಾಗೂ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅದ್ದಿ ಬೊಳ್ಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.