ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರಿನ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ರೈಲ್ವೇ ಮಂಡಳಿಯ ಅಧಿಕಾರಿಗಳು, ರೈಲ್ವೇ ಸೇತುವೆ ಸಮೀಪ ಸಾರ್ವಜನಿಕರ ಅನುಕೂಲಕ್ಕಾಗಿ, ಕೇಳ ಸೇತುವೆ ಮಾಡುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಹಾಗೂ ಸ್ಥಳ ಪರೀಶಿಲನೆ ಮಾಡಿದರು.
ಕೋಲಾರ ಜಿಲ್ಲೆಯ ಸಂಸದರಾದ ಮುನಿಸ್ವಾಮಿ ರವರ ಕಾಳಜಿಯುತ ಆದೇಶದ ಮೇರೆಗೆ ಇಂದು ನೇರ ಕೇಂದ್ರ ರೈಲ್ವೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೇಳ ಸೇತುವೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದು, ಅನುಷ್ಟಾನಕ್ಕೆ ಆದ್ಯತೆ ಬಗ್ಗೆ ಮಾತನಾಡಿದರು.
ಮಾಲೂರು ತಾಲ್ಲೂಕು ತಮಿಳುನಾಡು ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ದಿನೇ ದಿನೇ ವಾಹನ ಸಂಚಾರ ದಟ್ಟಣ್ಣೆ ಹೆಚ್ಚಾಗಿದ್ದು, ರೈಲ್ವೇ ಸೇತುವೆ ಮೇಲೆ ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಸೇತುವೆಯ ಮೇಲಿನ ರಸ್ತೆ ಕಿರಿದ್ದಾಗಿದ್ದು ಆಗಾಗ ಅಪಘೌತಗಳು ಸಂಭವಿಸಿ ಹಲವಾರು ಮಂದಿ ಕೈಕಾಲುಗಳನ್ನು ಕಳೆದುಕೊಂಡರೆ ಇನ್ನೂ ಕೆಲವು ಮಂದಿ ಸಾವನ್ನಾಪ್ಪಿದ್ದಾರೆ.
ಈ ಕಾರ್ಯದಲ್ಲಿ ರೈಲ್ವೇ ಕೇಂದ್ರ ಮಂಡಳಿಯ ಅಭಿಯಂತರ ರವೀಂದ್ರ ರಾವ್, ಅಧಿಕಾರಿಗಳಾದ ಶ್ರೀವತ್ಸ, ಮಾಲೂರಿನ ದಂಡಾಧಿಕಾರಿಗಳಾದ ರಮೇಶ್ ರವರು ಹಾಜರಿದ್ದು ಸರ್ವೇ ಕಾರ್ಯವನ್ನು ಗಮನಿಸಿದರು.
ಕಾರ್ಯದಲ್ಲಿ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕುಮಾರ್, ಅಂಬರೀಶ್ ರೆಡ್ಡಿ, ಅನಿತಾ ನಾಗರಾಜ್, ಮುಖಂಡರಾದ ಶಿವಶಂಕರ್, ರಮೇಶ್, ಅಮುದಾ ವೇಣು, ಪದ್ಮಾವತಿ, ವೆಂಕಟೇಶ್ ರೆಡ್ಡಿ, ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ವೇಣುಗೋಪಾಲ ಗೌಡ, ಸಾಗರ್ ಗೌಡ ಇತರರು ಹಾಜರಿದ್ದರು.
ವರದಿ:ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.