ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ ರೇಷ್ಮೆ ಬೆಳೆಗೆ ರೋಗಬಾಧೆ ಬಾಧಿಸುತ್ತಿದ್ದರೂ ಸಹ ಇಲಾಖಾ ಅಧಿಕಾರಿಗಳು ರೋಗವನ್ನು ನಿರ್ಮೂಲನೆ ಮಾಡಲು ವಿಫಲರಾಗಿದ್ದು ರೇಷ್ಮೆ ಬೆಳೆಗಾರರು ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹೆಚ್ಎಂ ಕ್ಯಾತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ವೈಹುಣಸೇನಹಳ್ಳಿಯ ಸಿಆರ್ಸಿ ಕೇಂದ್ರದಲ್ಲಿ ಕೃಷಿ ಇಲಾಖೆ ಮತ್ತು ಎನ್ಆರ್ಡಿಎಸ್ ಇವರ ಸಹಯೋಗದೊಂದಿಗೆ ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ 2021-22 ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಡ್ಲಘಟ್ಟ ತಾಲೂಕು ಸಹಿತ ಜಿಲ್ಲೆಯಲ್ಲಿ ರೈತರು ಫಲವತ್ತಾದ ಭೂಮಿಯನ್ನು ಎಥೇಚ್ಚವಾಗಿ ರಾಸಾಯನಿಕ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಳೆದುಕೊಂಡಿದ್ದೇವೆ ಇದರಿಂದ ಯಾವುದೇ ಬೆಳೆ ಇಟ್ಟರೂ ನಷ್ವವನ್ನು ಅನುಭವಿಸುವಂತಾಗಿದೆ ರೈತರು ಸಾವಯವ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಸಂರಕ್ಷಣೆ ಮಾಡಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ಮೂಲಕ ಅತೀ ಕಡಿಮೆ ದರದಲ್ಲಿ ಕೃಷಿಗೆ ಪೂರಕವಾಗಿರುವ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ ಜೊತೆಗೆ ಕಂಪನಿಯಲ್ಲಿ ಸದಸ್ಯರಾಗಿರುವ ರೈತರಿಗೆ ತಿಂಗಳಿಗೆ 20 ಸಾವಿರ ವಸ್ತುಗಳನ್ನು ಖರೀದಿಸಲು (ರೈತ ಉತ್ಪಾದಕರ ಕಂಪನಿಯಲ್ಲಿ ಮಾತ್ರ) ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದೆ ಇದನ್ನು ಸದುಪಯೋಗ ಮಾಡಿಕೊಂಡು ರೇಷ್ಮೆ ಕೃಷಿ ಅಥವಾ ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ಸಾಮಾಗ್ರಿಗಳನ್ನು ಕಾರ್ಡ್ ಬಳಸಿ ಖರೀದಿಸಬಹುದು ಒಂದು ತಿಂಗಳ ಅವಧಿಯಲ್ಲಿ 20 ಸಾವಿರ ರೂಗಳನ್ನು ಮರುಪಾವತಿಸಿದರೆ ಮುಂದಿನ ದಿನಗಳಲ್ಲಿ 50 ಸಾವಿರವರೆಗೂ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶವಾಗುತ್ತದೆ ಸಂಘದ ಸದಸ್ಯರು 2 ಸಾವಿರ ರೂಗಳನ್ನು ಪಾವತಿಸಿ ಕಾರ್ಡ್ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆಹೆಚ್ ವೀಣಾ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಮೂಲಕ ವಾರ್ಷಿಕ 10 ಸಾವಿರ ರೂಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ ರೈತರು ಇಕೆವೈಸಿ ಮಾಡಿಕೊಂಡು ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿ ರೈತರು ಸ್ವಯಂ ಪ್ರೇರಿತರಾಗಿ ಅಥವಾ ಸಿಎಸ್ಸಿ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಕೊಳ್ಳಬೇಕು ಇದರಿಂದ ಭವಿಷ್ಯದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದರು.
ವೈಹುಣಸೇನಹಳ್ಳಿ ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ಸಿಇಒ ಎನ್ ಚಂದನಾ ಮಾತನಾಡಿ ಕಂಪನಿಯಲ್ಲಿ ಒಟ್ಟು 688 ಷೇರುದಾರರಿದ್ದಾರೆ, ಕಳೆದ ಸಾಲಿನ ನವೆಂಬರ್ನಿಂದ ವಹಿವಾಟು ನಡೆಯುತ್ತಿದೆ ಕಂಪನಿಯಲ್ಲಿ ರೇಷ್ಮೆ ಉಪಕರಣಗಳು ಚಕ್ಕೆ ಬೂಸಾ ಇಂಡಿ ಕೀಟನಾಶಕಗಳು ಕಳೆನಾಶಕಗಳು ಹಾಗೂ ರಸಗೊಬ್ಬರವನ್ನು ಮಾರಾಟ ಮಾಡಲಾಗುತ್ತದೆ ಇದುವರೆಗೆ 36 ಸಾವಿರ ರೂಗಳ ಲಾಭವನ್ನು ಕಂಪನಿ ಹೊಂದಿದೆ ಪ್ರಸಕ್ತ ಸಾಲಿನಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ರೈತರಿಗೆ ಯೂರಿಯಾ ಡಿಎಪಿ ಗೊಬ್ಬರವನ್ನು ಮಾರಾಟ ಮಾಡಲು ಸಬಾರ್ಡ್ ಬ್ಯಾಂಕಿನಿಂದ 2022-23 ನೇ ಸಾಲಿಗೆ 25 ಲಕ್ಷ ರೂಗಳು ಸಮೂನತಿ ಹಣಕಾಸು ಸಂಸ್ಥೆಯಿಂದ 5 ಲಕ್ಷ ರೂಗಳ ಸಾಲವನ್ನು ಪಡೆಯಲು ನಿರ್ಧರಿಸಲಾಗಿದೆ ಸರ್ಕಾರದಿಂದ ಸಫಾಕ್ ಸಂಸ್ಥೆಯಿಂದ 10 ಲಕ್ಷ ರೂಗಳು ಮತ್ತು ಕೃಷಿ ಇಲಾಖೆಯಿಂದ 5 ಲಕ್ಷ ರೂಗಳ ನೆರವು ದೊರೆಯಲಿದೆ ಎಂದರು.
ಸಭೆಯಲ್ಲಿ ಎನ್ಆರ್ಡಿಎಸ್ ಸಂಸ್ಥೆಯ ಕಾರ್ಯನಿರ್ವಹಕ ನಿರ್ದೇಶಕ ಎಂ ವೆಂಕಟರಮಣಸ್ವಾಮಿ, ಕಲ್ಪವೃಕ್ಷ ಕೃಷಿ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಡಿಎನ್ ಆಂಜನೇಯರೆಡ್ಡಿ, ಪಿ ಮುನಿರಾಜು, ಎನ್ ಮಂಜುನಾಥ್, ನಾರಾಯಣಪ್ಪ, ಕೆಎನ್ ಮಂಜುನಾಥ್, ವಿ ರಮೇಶ್, ಅಂಬಿಕಾ, ವಿಎಸ್ ಕೃಷ್ಣಾರೆಡ್ಡಿ, ಸುಶೀಲಾ, ಬಿಎಲ್ ಜಯರಾಮ್, ಅನಿತಾ, ಎನ್.ವೆಂಕಟೇಶ್, ನರಸಿಂಹಗೌಡ, ಜಿಲ್ಲಾ ಎಫ್ಪಿಒ ಸಂಯೋಜಕ ಎನ್ ಮನೋಹರ್, ಡಿಇಒ ಮಧು, ಜಿಲ್ಲಾ ಎಫ್ಪಿಒ ಸಹಸಂಯೋಜಕ ಹೆಚ್ವಿ ಶ್ರೀರಾರೆಡ್ಡಿ ಹಾಗೂ ಕಂಪನಿಯ ಸದಸ್ಯರು ಮತ್ತು ಷೇರುದಾರರು ಉಪಸ್ಥಿತರಿದ್ದರು.
ವರದಿ:ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.