ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ದಿ ಪಡೆದಿರುವ, ಭರತನಾಟ್ಯ ಶಾಲೆಗಳಲ್ಲಿ ನಂ-1 ಆಗಿ ರಾಜ್ಯವ್ಯಾಪಿ ಕಾರ್ಯಕ್ರಮಗಳ ಮೂಲಕ ವಿಶೇಷ ಆಕರ್ಷಣೆ ಗಳಿಸಿರುವ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಲೂರು, ಲಕ್ಕೂರು, ಚಿಕ್ಕತಿರುಪತಿ ಹಾಗೂ ದೊಡ್ಡ ದುನ್ನಸಂದ್ರ ಕ್ರಾಸ್ ಮಕ್ಕಳಿಂದ ವಿಶ್ವವಿಖ್ಯಾತ ದಸರ ಹಬ್ಬದಲ್ಲಿ ನವರಾತ್ರಿಯ ವಿಶೇಷತೆಯನ್ನು ಈ ಬಾರಿ ಭರತನಾಟ್ಯ ನೃತ್ಯ ಪ್ರದರ್ಶಿಸುವ ಮೂಲಕ ದೇವಿಯ ಆರಾಧನೆ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ವೇತಾಂಜಲಿ ಭರತನಾಟ್ಯ ಶಾಲೆ ಸಂಸ್ಥಾಪಕ ಅಧ್ಯಕ್ಷರು, ಕಲಾಸೇವಾ, ಅನಿಕೇತನ, ಕನ್ನಡ ವೈಭವ ಹಾಗೂ ಕರುನಾಡ ಕಣ್ಮಿಣಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡುತ್ತಾ “ಕರ್ನಾಟಕದ ದಸರ ಎಂದು ಕರೆಯುವ ಹಿಂದೂ ಧರ್ಮದ ಪವಿತ್ರ ಹಬ್ಬ ಎಂದರೆ ನವರಾತ್ರಿ. ಒಂಬತ್ತು (ನವ) ರಾತ್ರಿಗಳು, ನಾವು ನಮ್ಮ ಶಾಲೆಯಿಂದ ಈ ಬಾರಿ ದೇವಿಯ ಒಂಬತ್ತು ವಿವಿಧ ರೂಪಗಳನ್ನು ಒಳಗೊಂಡ ಭರತನಾಟ್ಯ ನೃತ್ಯ ಸಂಯೋಜನೆ ಮಾಡಿ, ಪ್ರತಿ ದಿನವು ನಮ್ಮ ಎಲ್ಲಾ ಶಾಲೆಗಳ ಒಂದೊಂದು ಮಗು ಆಯ್ಕೆ ಮಾಡಿ ಆ ಮಗುವಿನ ಮೂಲಕ ನೃತ್ಯ ಮಾಡಿಸಿ ದೇವಿಗೆ ಸಮರ್ಪಣೆ ಮಾಡುವ ಮೂಲಕ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ.
ಶ್ವೇತಾಂಜಲಿ ಭರತನಾಟ್ಯ ಶಾಲೆ ಪ್ರಧಾನ ಕಾರ್ಯದರ್ಶಿ ಹಾಗೂ ವಿ.ಕೆ.ಎಫ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ ” ಶ್ವೇತಾಂಜಲಿ ಭರತನಾಟ್ಯ ಶಾಲೆ ಈ ವರ್ಷ ನವರಾತ್ರಿಯ ಸಂಭ್ರಮವನ್ನು ಒಂಬತ್ತು ದಿನ ದೇವಿಯ ಆರಾಧನೆಯನ್ನು ಭರತನಾಟ್ಯ ನೃತ್ಯ ಪ್ರದರ್ಶನವನ್ನು ಮಕ್ಕಳಿಂದ ಮಾಡಿಸಿ ಸಮರ್ಪಣೆ ಮಾಡುವ ಕಾರ್ಯ ನಡೆಯುತ್ತಿದೆ. ನವದುರ್ಗೆಯರಿಗೆ ಗೌರವ ಪೂರ್ವಕ ನಮನ ಸಲ್ಲಿಸುವ ಮೂಲಕ ಶಾಲೆಯ ಮಕ್ಕಳು, ಪೋಷಕರ ಸಹಕಾರದಿಂದ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಕಾರ್ಯಗಳಿಗೂ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ರವರ ಶ್ರಮ ಅನನ್ಯ” ಎಂದರು.
ಶ್ವೇತಾಂಜಲಿ ಭರತನಾಟ್ಯ ಶಾಲೆ ಮಾಲೂರು, ಲಕ್ಕೂರು , ಚಿಕ್ಕತಿರುಪತಿ, ದುನ್ನಸಂದ್ರ ಕ್ರಾಸ್ ಮಕ್ಕಳು ಅದ್ಬುತವಾಗಿ ನೃತ್ಯದ ಸಮರ್ಪಣೆಯನ್ನು ಪ್ರತಿದಿನ ಅರ್ಪಿಸುತ್ತಿದ್ದು ನಮ್ಮ ಶಾಲೆಯು ಭರತನಾಟ್ಯ ನೃತ್ಯದ ಮೂಲಕ ನವರಾತ್ರಿ ಆರಾಧನೆಯ ಭರತನಾಟ್ಯ ನೃತ್ಯದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸುವ ಕೆಲಸವನ್ನು ನಾವು ಮಾಡುತ್ತೇವೆ..
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.