ಯಥಾ ಸ್ಥಿತಿ ಕಾಪಾಡಿ, ಹೊಸ ನಿಯಮ ರದ್ದು ಮಾಡಲು ಎಸ್ ಕೆ ಎಸ್ ಎಸ್ ಎಫ್ ಜಿ ಸಿ ಸಿ ಕೊಡಗು ಘಟಕ ಆಗ್ರಹ
(www.vknews.com) : ಭಾರತ ದೇಶದಿಂದ ಅಂತಾರಾಷ್ಟ್ರೀಯ ಪ್ರಯಾಣ ಮಾಡುವ ಭಾರತೀಯ ನಾಗರಿಕರಿಗೆ, ಕೆಲವೊಂದು ಷರತ್ತುಗಳನ್ನು ವಿಧಿಸಿ ಹೊಸ ಆದೇಶವೊಂದನ್ನು ಭಾರತ ಸರಕಾರ ಇತ್ತೀಚೆಗೆ ಹೊರಡಿಸಿದೆ. ಈ ಹೊಸ ಆದೇಶದಿಂದ ಲಕ್ಷಾಂತರ ಅನಿವಾಸಿ ಭಾರತೀಯರು ಕಂಗಾಲಾಗಿದ್ದಾರೆ. ಭಾರತೀಯ ಅರ್ಥ ವ್ಯವಸ್ಥೆ ಯಲ್ಲಿ ಪ್ರಮುಖ ಪಾತ್ರ ವಹಿಸುವ ಅನಿವಾಸಿ ಭಾರತೀಯರು, ಸರಕಾರದ ಗೊಂದಲದ ನಿರ್ಧಾರದಿಂದ ಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ವರ್ಷಕ್ಕೆ ಸರಾಸರಿ 68.698 ಬಿಲಿಯನ್ ಡಾಲರ್ ನಷ್ಟು ಹಣ ಅನಿವಾಸಿ ಭಾರತೀಯರ ಮೂಲಕ ಭಾರತಕ್ಕೆ ಹರಿದು ಬರುತ್ತದೆ ಹಾಗೂ ಇದು ಆರ್ಥಿಕ ಪುನಶ್ಚೇತನಕ್ಕೆ ಪ್ರಮುಖ ಕಾರಣ ಕೂಡ ಆಗಿರುತ್ತದೆ…
ರಜಾ ಅವಧಿ ಹಾಗೂ ಇನ್ನಿತರ ಕಾರಣಗಳಿಂದ ಭಾರತಕ್ಕೆ ತೆರಳಿ ಲಾಕ್ ಡೌನ್ ಕಾರಣ ಮನೆಯಲ್ಲೇ ಇದ್ದು, ಲಾಕ್ಡೌನ್ ಹಿಂಪಡೆದ ನಂತರ ವಿದೇಶಕ್ಕೆ ಮರಳಲು ತಯಾರಿ ನಡೆಸುತ್ತಿರುವಾಗಲೇ, ” ಗಾಯದ ಮೇಲೆ ಬರೆ ಎಂಬಂತೆ” ಈ ಆದೇಶ ಬಂದೊದಗಿದೆ. “1 ರಿಂದ 3 ತಿಂಗಳ ಕಾಲ ಅನ್ಯ ದೇಶಗಳ ವೀಸಾ ಅವಧಿ ಬಾಕಿ ಇರುವ ಅನಿವಾಸಿ ಭಾರತೀಯರಿಗೆ ಪ್ರಯಾಣ ನಿರ್ಬಂಧ ವಿಧಿಸಿ ಕಷ್ಟಕ್ಕೆ ತಳ್ಳಿದೆ.
ಭಾರತ ಸರಕಾರದ ಹೊಸ ಆದೇಶ ಈ ಕೆಳಗಿನಂತೆ ಇವೆ.
1. ಇತರ ದೇಶದ ಪ್ರಜೆಗಳು ಭಾರತದಲ್ಲಿ ಸಿಲುಕಿದ್ದರೆ, ಅಂಥವರು ವಿದೇಶ ಪ್ರಯಾಣಕ್ಕೆ ಅರ್ಹರು. 2. ಗಲ್ಫ್ ರಾಷ್ಟ್ರಗಳ ಕನಿಷ್ಠ 1 ವರ್ಷ ಅಥಾವ 6 ತಿಂಗಳ ಉದ್ಯೋಗ ವೀಸಾ ಇದ್ದವರು ಅರ್ಹರು. 3.ಯೂರೋಪ್, ಅಮೆರಿಕಾ ದೇಶಗಳ ಗ್ರೀನ್ ಕಾರ್ಡ್ ಹೊಂದಿರುವವರು ಅರ್ಹರು. 4.ಕುಟುಂಬದವರ ಮರಣ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾದವರು ಅರ್ಹರು.
ಇಲ್ಲಿ ಬಹುಮುಖ್ಯ ಪ್ರಶ್ನೆ ಏನೆಂದರೆ 1 ತಿಂಗಳ ಅಥಾವ 2 ತಿಂಗಳ ವೀಸಾ ಕಾಲಾವಧಿ ಇರುವವರಿಗೆ ನಿರ್ಬಂಧ ವಿಧಿಸಿದ ಮಾನದಂಡವಾದರೂ ಏನು…? ದುಡಿಯುವ ಕೈಗಳನ್ನು ಕಟ್ಟಿ ಹಾಕುತ್ತಿರುವ ಉದ್ದೇಶ ವಾದರೂ ಏನು….? ಬಡವರನ್ನು ಬಡವರಾಗಿಯೇ ಉಳಿಸುವ ಉದ್ದೇಶವೇ….? ಕೇಂದ್ರ ಸರಕಾರವೇ ಉತ್ತರಿಸಬೇಕು…
ಕೂಡಲೇ ಕೇಂದ್ರ ಸರಕಾರ ಈ ಗೊಂದಲದ ನೂತನ ಆದೇಶ ರದ್ದು ಮಾಡಿ, ಮೊದಲಿನಂತೆಯೇ ಯಥಾ ಸ್ಥಿತಿ ಕಾಪಾಡಿ ಅನಿವಾಸಿ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು, ಎಸ್. ಕೆ. ಎಸ್. ಎಸ್. ಫ್. ಜಿ ಸಿ ಸಿ ಘಟಕ ಕೊಡಗು ಆಗ್ರಹ ಮಾಡುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.