(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿದ ಸಮಯವನ್ನು ಪೋಲು ಮಾಡದೇ, ಪ್ರೊ. ಎಂ. ಅಬೂಬಕರ್ ತುಂಬೆ ಅವರು ಹಲವಾರು ಪ್ರಮುಖ ಹದೀಸ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ.
ಹದೀಸ್ ಗಳ ಕನ್ನಡ ಅನುವಾದಗಳನ್ನು ವಿಶ್ವ ಕನ್ನಡಿಗ ನ್ಯೂಸ್ ತಮ್ಮ ಓದುಗರಿಗಾಗಿ “ಹದೀಸ್ ದರ್ಶನ” ಎಂಬ ತಲೆಬರಹದಲ್ಲಿ “ಪ್ರತಿ ಬುಧವಾರ” ಪ್ರಕಟಿಸುತ್ತಿದೆ… ತಪ್ಪದೆ ಓದಿ…
حَدَّثَنَا مُحَمَّدُ بْنُ عَرْعَرَةَ، قَالَ حَدَّثَنَا شُعْبَةُ، عَنْ سُلَيْمَانَ، عَنْ مُسْلِمٍ الْبَطِينِ، عَنْ سَعِيدِ بْنِ جُبَيْرٍ، عَنِ ابْنِ عَبَّاسٍ، عَنِ النَّبِيِّ صلى الله عليه وسلم أَنَّهُ قَالَ ” مَا الْعَمَلُ فِي أَيَّامِ الْعَشْرِ أَفْضَلَ مِنَ الْعَمَلِ فِي هَذِهِ ”. قَالُوا وَلاَ الْجِهَادُ قَالَ ” وَلاَ الْجِهَادُ، إِلاَّ رَجُلٌ خَرَجَ يُخَاطِرُ بِنَفْسِهِ وَمَالِهِ فَلَمْ يَرْجِعْ بِشَىْءٍ ”.
17.ಹ.ಇಬ್ನ್ ಅಬ್ಬಾಸ್ (ರ) ರವರಿಂದ ವರದಿ: ಪ್ರವಾದಿ (ﷺ), ಹೇಳಿದರು “ಇತರ ದಿನಗಳಲ್ಲಿ ಮಾಡಿದ ಯಾವುದೇ ಒಳ್ಳೆಯ ಕಾರ್ಯಗಳು ಈ ಹತ್ತು ದಿನಗಳಲ್ಲಿ (ಧುಲ್ ಹಿಜ್ಜಾದ ಮೊದಲ ಹತ್ತು ದಿನಗಳು) ಮಾಡಿದ ಕಾರ್ಯಗಳಿಗಿಂತ ಶ್ರೇಷ್ಠವಲ್ಲ”. ಆಗ ಪ್ರವಾದಿ (ﷺ) ರೊಡನೆ ಕೆಲವು ಸಹಚರರು ಕೇಳಿದರು, “ಜಿಹಾದ್ ಕೂಡ ಅಲ್ಲವೇ?” ಅವರು ಉತ್ತರಿಸಿದರು, “ಜಿಹಾದ್ ಕೂಡ ತನ್ನನ್ನು ಮತ್ತು ತನ್ನ ಆಸ್ತಿಯನ್ನು ಅಪಾಯಕ್ಕೆ ಸಿಲುಕಿಸುವ ಮೂಲಕ (ಅಲ್ಲಾಹನ ಸಲುವಾಗಿ) ಅದನ್ನು ಮಾಡುವ ಮತ್ತು ಆ ಯಾವುದೇ ಸಂಗತಿಗಳೊಂದಿಗೆ ಹಿಂತಿರುಗುವುದಿಲ್ಲ.”
وعن أبي قتادة رضي الله عنه قال: سئل رسول الله صلى الله عليه وسلم: عن صوم يوم عرفة؟ قال: “يكفر السنة الماضية والباقية” ((رواه مسلم)).
18. ಹ.ಅಬು ಖತಾದಾ (ರ.ಅ) ರವರಿಂದ ವರದಿ: ‘ಅರಾಫಾ’ ದಿನದ ಉಪವಾಸ ಆಚರಣೆಯ ಬಗ್ಗೆ ಅಲ್ಲಾಹುವಿನ ಪ್ರವಾದಿ (ﷺ) ಅವರನ್ನು ಕೇಳಲಾಯಿತು. “ಇದು ಹಿಂದಿನ ವರ್ಷದ ಮತ್ತು ಪ್ರಸಕ್ತ ವರ್ಷದ ಪಾಪ ವಿಮೋಚನೆಗೆ ಪ್ರಾಯಶ್ಚಿತ್ತ ” ಎಂದು ಅವರು ಹೇಳಿದರು.(ಮುಸ್ಲಿಂ)
ಕನ್ನಡಕ್ಕೆ ಅನುವಾದ : ಪ್ರೊ. ಎಂ. ಅಬೂಬಕರ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.