ಮಂಗಳೂರು(www.vknews.in): 20 ಕುಟುಂಬಗಳು ವಾಸಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಎರ್ಮಾಲ್ ಪಲ್ಕೆ ಎಂಬ ಪರಿಸರದಲ್ಲಿ ಅಲ್ ಉಮ್ಮಾ ಹೆಲ್ಪ್ ಲೈನ್ ದ.ಕ.ಜಿಲ್ಲೆ ಇದರ ವತಿಯಿಂದ ಕೊಳವೆ ಬಾವಿಯನ್ನು ನಿರ್ಮಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ರಂಝಾನ್ ಮಾಸದಲ್ಲಿ ನೀರಿನ ಬರದಿಂದ ಕಷ್ಟಪಡುತ್ತಿದ್ದ ಎರ್ಮಾಲ್ ಪಲ್ಕೆ ಜನರು ಈಗ ನಿಟ್ಟುಸಿರು ಬಿಡುವಂತಾಗಿದೆ. ಈ ಕೊಳವೆ ಬಾವಿ ನಿರ್ಮಾಣ ಕಾರ್ಯದಲ್ಲಿ ಅಲ್ ಉಮ್ಮಾ ಹೆಲ್ಪ್ ಲೈನ್ ಸದಸ್ಯರಾದ ಹಮೀದ್ ಸಹದ್ ಅಪ್ಪು ರಿಯಾಝ್ ,ಶೆರೀಪ್ ಮುನ್ನ ರಿಯಾಝ್ (ಜಿಯಾ) ಇನ್ನಿತ ಹಲವರು ಮುತುವರ್ಜಿ ವಹಿಸಿದ್ದರು. ಅದಲ್ಲದೇ ಅಲ್ ಉಮ್ಮಾ ಹೆಲ್ಪ್ ಲೈನ್ ತಂಡದ ಪ್ರದಾನ ಕಾರ್ಯದರ್ಶಿಯಾದ ಹಕೀಂ ಮಲೆಬೆಟ್ಟು ಇವರ ನೇತೃತ್ವದಲ್ಲಿ ಸುಮಾರು 80 ಜನರಿಗೆ ಇಪ್ತಾರ್ ಕೂಟ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.