ದೇರಳಕಟ್ಟೆ(ವಿಶ್ವಕನ್ನಡಿಗ ನ್ಯೂಸ್): SKSSF ದೇರಳಕಟ್ಟೆ ಶಾಖೆಯ ವತಿಯಿಂದ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿ ದೈನಂದಿನ ಜೀವನಕ್ಕಾಗಿ ಕಷ್ಟಪಡುತ್ತಿರುವ ದೇರಳಕಟ್ಟೆ ಹಾಗೂ ಪರಿಸರ ಪ್ರದೇಶದ ಅರ್ಹ ಕುಟುಂಬಗಳಿಗೆ 3 ನೇ ಹಂತದ ರೇಶನ್ ಕಿಟ್ ವಿತರಣಾ ಕಾರ್ಯಕ್ರಮವು ಗ್ರೀನ್ ಗ್ರೌಂಗ್ ಮದರಸದಲ್ಲಿ SKSSF ದೇರಳಕಟ್ಟೆ ಶಾಖೆಯ ಅಧ್ಯಕ್ಷರಾದ ನಿಯಾಝ್ ಡಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿ ಮಾತನಾಡಿದ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಬಹು ರಿಯಾಝ್ ರಹ್ಮಾನಿ ರವರು SKSSF ದೇರಳಕಟ್ಟೆ ಶಾಖೆಯ ಕಾರ್ಯಕರ್ತರು ಲಾಕ್ ಡೌನ್ ಪ್ರಾರಂಭವಾದ ದಿನದಿಂದ ನಿರಂತರವಾಗಿ ದೇರಳಕಟ್ಟೆ ಹಾಗೂ ಪರಿಸರ ಪ್ರದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಗೂ ಸಹಾಯಕರಿಗೆ ಮಾದ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ. ಸುಮಾರು 270 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ. ಆಂಬ್ಯುಲೆನ್ಸ್ ಮೂಲಕ ರೋಗಿಗಳ ಸೇವೆ. ರಂಝಾನಿನ ಪ್ರತಿ ದಿವಸವೂ ದೇರಳಕಟ್ಟೆ ಪರಿಸರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳು ಹಾಗೂ ಅವರ ಜೊತೆ ಸಹಾಯಕರಾಗಿ ಬರುವ 200 ಕ್ಕೂ ಹೆಚ್ಚು ಮಂದಿ ಉಪವಾಸಿಗರಿಗೆ ಇಫ್ತಾರ್ ವ್ಯವಸ್ಥೆ ಮುಂತಾದ ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಿರುವ ದೇರಳಕಟ್ಟೆ SKSSF ಶಾಖೆಯು ನಮ್ಮ ನಾಡಿಗೆ ಅಭಿಮಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ SKSSF ಉಳ್ಳಾಲ ಕ್ಲಸ್ಟರ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ದಾರಿಮಿಯವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷರೂ ದೇರಳಕಟ್ಟೆ ಎಜುಕೇಶನಲ್&ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನಾಟೆಕ್ಕಲ್. ಮನಾರುಲ್ ಹುದಾ ಮದರಸ ಅಧ್ಯಕ್ಷರೂ.SYS ದೇರಳಕಟ್ಟೆ ಅಧ್ಯಕ್ಷರಾದ ಜನಾಬ್ ಸಯ್ಯದ್ ಅಲಿ. ಕೋಶಾಧಿಕಾರಿ ಹಾಜಿ ಅಬ್ದುರ್ರಹ್ಮಾನ್. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಇಲ್ಯಾಸ್.ಡಿ. ಮನಾರುಲ್ ಹುದಾ ಮದರಸ ಗ್ರೀನ್ ಗ್ರೌಂಡ್ ಉಪಾಧ್ಯಕ್ಷರಾದ ಮೊಹಮ್ಮದ್ ಪನೀರ್. SYS ಉಳ್ಳಾಲ ಪ್ರದಾನ ಕಾರ್ಯದರ್ಶಿ ಜನಾಬ್ ನಝೀರ್ ಉಳ್ಳಾಲ. ಉದ್ಯಮಿಗಳಾದ ತಾಜುದ್ದೀನ್.ಲತೀಫ್. ಇಕ್ಬಾಲ್ ಹೆಚ್.ಆರ್.ಇಬ್ರಾಹಿಂ ಬದ್ಯಾರ್. SKSSF ದೇರಳಕಟ್ಟೆ ಶಾಖೆಯ ಉಪಾಧ್ಯಕ್ಷರಾದ ಫೈಝಲ್ ಡಿ.ಎಂ. ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮುನ್ಸಿದ್. ಕೋಶಾಧಿಕಾರಿ ಮೊಹಮ್ಮದ್ ಇರ್ಫಾನ್ ಡಿ. SKSSF ದೇರಳಕಟ್ಟೆ ಶಾಖೆಯ ಕಾರ್ಯಕರ್ತರಾದ ಹನೀಫ್ ದೇರಳಕಟ್ಟೆ. ರಹ್ಮತ್ ಪಾಲ್ದಡಿ ಯಾಕೂಬ್. ಹರ್ಷಾದ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.