ಮೂರುಗೋಳಿ (www.vknews.com) : ಜೂನ್ 21ಆದಿತ್ಯವಾರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:00 ತನಕ SSF ಮೂರುಗೋಳಿ ಸೆಕ್ಟರ್ ಆಯೋಜಿಸಿದ ಇಂಡಿಯನ್ ರೆಡ್ ಕ್ರಾಸ್ ಸೊಸ್ಯೆಟಿ,ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ನಡೆದ ದ.ಕ ಜಿಲ್ಲಾ ಬ್ಲಡ್ ಸ್ಯೆಬೋ ಇದರ 155ನೇ ರಕ್ತದಾನ ಶಿಬಿರವು ಸೆಕ್ಟರ್ ಅಧ್ಯಕ್ಷರಾದ
ಏ ಕೆ ಇಬ್ರಾಹೀಂ ಸ’ಅದಿ ಉಸ್ತಾದ್ ಕಳಂಜಿಬೈಲು ಇವರ ಅಧ್ಯಕ್ಷತೆಯೊಂದಿಗೆ ಮೂರುಗೋಳಿ ಸಭಾ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಸ್ತುತ ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಬಹು ಅತಾವುಲ್ಲ ಹಿಮಮಿ ಸಖಾಫಿ ಕುಪ್ಪೆಟ್ಟಿ ಉದ್ಘಾಟಿಸಿದರು, ದ.ಕ. ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ದಿಕ್ಸೂಚಿ ಭಾಷಣ ಮಾಡಿದರು , ಜಿಲ್ಲಾ ಬ್ಲಡ್ ಸೈಬೊ ಉಸ್ತುವಾರಿಯಾದ ಕರೀಂ ಕದ್ಕಾರ್ ಮತ್ತು ರೆಡ್ ಕ್ರಾಸ್ ಸೊಸೈಟಿ ಇದರ ಉಸ್ತುವಾರಿಯಾದ ಪ್ರವೀಣ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ದ.ಕ .ಈಸ್ಟ್ ಝೋನ್ ಬ್ಲಡ್ ಸೈಬೊ ಉಸ್ತುವಾರಿ ಇಮ್ರಾನ್ ರೆಂಜಳಾಡಿ, ಉಪ್ಪಿನಂಗಡಿ ಡಿವಿಷನ್ ಬ್ಲಡ್ ಸೈಬೋ ಉಸ್ತವಾರಿಯಾದ ಇಸ್ಹಾಕ್ ಮದನಿ ಅಳಕ್ಕೆ , ಡಿವಿಷನ್ ಅಧ್ಯಕ್ಷರಾದ ಮುಹಮ್ಮದ್ ಮಿಸ್ಬಾಹಿ ಕಡಬ , ಡಿವಿಷನ್ ಪ್ರ.ಕಾರ್ಯದರ್ಶಿ ಮುಸ್ತಫಾ ಉರುವಾಲು ಪದವು , ಕೋಶಾಧಿಕಾರಿ ಲತೀಫ್ ಕನ್ಯಾರಕೋಡಿ, ಡಿವಿಷನ್ ಮಾಜಿ ಅಧ್ಯಕ್ಷರಾದ ಮಸೂದ್ ಸ’ಅದಿ , ಸೆಕ್ಟರ್ ಬ್ಲಡ್ ಸೈಬೊ ಉಸ್ತುವಾರಿಗಳಾದ ಸಿಹಾಬ್ ಜೆ ಕೆ ಕಕ್ಕೆಪದವು ಹಾಗು ಇನ್ನಿತರ ಡಿವಿಷನ್ , ಸೆಕ್ಟರ್ ನಾಯಕರು ಉಪಸ್ಥಿತರಿದ್ದರು. ಪ್ರಸ್ತುತ ರಕ್ತದಾನ ಶಿಬಿರದಲ್ಲಿ ಒಟ್ಟು 125 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಜುನೈದ್ ತುರ್ಕಳಿಕೆ ಸ್ವಾಗತಿಸಿ ರಕ್ತದಾನ ಮಾಡಿ ಸಹಕರಿಸಿದ ಎಲ್ಲಾ ದಾನಿಗಳನ್ನು ಅಭಿನಂದಿಸಿ ಪಿರೋಝ್ ಮುಈನಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.